ಪುತ್ತೂರು: ಪುತ್ತೂರು-ಉಪ್ಪಿನಂಗಡಿ ರಸ್ತೆಯಲ್ಲಿ ಓವರ್ ಟೇಕ್ ಮಾಡುವ ವಿಚಾರಕ್ಕೆ ಸಂಬಂಧಿಸಿ ದ್ವಿಚಕ್ರ ವಾಹನ ಚಾಲಕರಾದ ಅಯ್ಯಪ್ಪ ವೃತಾಧಾರಿಯ ಮೇಲೆ ಹಲ್ಲೆ ನಡೆಸಿದ ಆರೋಪಿ ಓಮ್ನಿ ಚಾಲಕನಿಗೆ ಪುತ್ತೂರು ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಅಯ್ಯಪ್ಪ ವೃತಾಧಾರಿಯಾಗಿದ್ದ ಬನ್ನೂರು ಗ್ರಾಮದ ಕರ್ಮಲ ಮಾರ್ನಡ್ಕ ನಿವಾಸಿ ಪುನಿತ್ ಅವರಿಗೆ ಬನ್ನೂರು ಗ್ರಾಮದ ಕರ್ಮಲ ನಿವಾಸಿ, ಬೊಳುವಾರಿನಲ್ಲಿ ಚಾಂಪಿಯನ್ ಸೈಕಲ್ ಶಾಪ್ ಹೊಂದಿರುವ ಅಬ್ಬಾಸ್ ಅವರ ಪುತ್ರ ಸೈಫುದ್ದೀನ್(27) ಹಲ್ಲೆ ನಡೆಸಿದ್ದರೆಂದು ಆರೋಪಿಸಲಾಗಿತ್ತು. ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡು ಡಿ.24ರಂದು ರಾತ್ರಿ ಆರೋಪಿ ಸೈಫುದ್ದೀನ್ನನ್ನು ಬಂಧಿಸಿದ್ದ ಪುತ್ತೂರು ನಗರ ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗೆ ಜಾಮೀನು ಮಂಜೂರು ಮಾಡಿದೆ.