ಮಂಗಳೂರು: ರಾಷ್ಟ್ರ ರಾಜಧಾನಿ ದೆಹಲಿ, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವಾಯುಮಾಲಿನ್ಯದ ಮಟ್ಟದ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಅದೇ ಸಮಸ್ಯೆಯು ಈಗ ಕರಾವಳಿ ಭಾಗಕ್ಕೂ ಕಾಡುತ್ತಲಿದೆ.
ಮಂಗಳೂರು ನಗರದಲ್ಲೂ ಶುದ್ಧ ಗಾಳಿಯ ಕೊರತೆ ಕಾಣಿಸಿಕೊಂಡಿದೆ ಎಂದು ಆ್ಯಂಟಿ ಪೊಲ್ಯೂಷನ್ ಡ್ರೈವ್(ಎಪಿಡಿ) ಫೌಂಡೇಶನ್ ನಡೆಸಿರುವ ಅಧ್ಯಯನ ವರದಿಯಲ್ಲಿ ಹೇಳಿದೆ.
ಅದರಲ್ಲೂ ಮಂಗಳೂರಿನ ಗಾಳಿಯಲ್ಲಿ ಸೀಸದ ಅಂಶವು ಪತ್ತೆಯಾಗಿದ್ದು, ಇದು ಆರೋಗ್ಯಕ್ಕೆ ತುಂಬಾ ಹಾನಿಕಾರಕ ಎಂದು ಅಧ್ಯಯನವು ತಿಳಿಸಿದೆ.
ನಗರದ ಕೆಲವು ಪ್ರದೇಶಗಳಲ್ಲಿ ಪಾರ್ಟಿಕ್ಯುಲೇಟ್ ಮ್ಯಾಟರ್ 2.5(ಪಿಎಂ), ಪಿಎಂ10 ಹಾಗೂ ಸೀಸದ ಅಂಶ ಪತ್ತೆಯಾಗಿದೆ. ಬಂಟ್ಸ್ ಹಾಸ್ಟೆಲ್, ಬಂದರು, ಮಹಾನಗರ ಪಾಲಿಕೆ, ಪಂಪ್ ವೆಲ್ ಮತ್ತು ಬೈಂಕಪಾಡಿ ನಡೆಸಿರುವ ಅಧ್ಯಯನದ ಪ್ರಕಾರ ಇಲ್ಲಿ ಪಿಎಂ 2.5 ಅಂಶ ಮಿತಿಗಿಂತ ಹೆಚ್ಚು ಇದೆ.
ಕೈಗಾರಿಕೆಗಳು ಅಧಿಕವಾಗಿದ್ದರೂ ವಾಹನಗಳಿಂದ ಉಗುಳುವಂತಹ ಹೊಗೆಯು ಮಾಲಿನ್ಯಕ್ಕೆ ಕಾರಣವಾಗುತ್ತಿದೆ ಎಂದು ಎಪಿಡಿ ಅಧ್ಯಯನವು ತಿಳಿಸಿದೆ.