ಬೀದರ್: ಮನೆಗೆ ಬೆಂಕಿ ತಗುಲಿ ಬೆಲೆಬಾಳುವ ವಸ್ತುಗಳು ಸುಟ್ಟು ಕರಕಲಾಗಿರುವುದನ್ನು ಕಂಡ ಮನೆ ಯಜಮಾನಿಯ ರೋದನ ನೋಡುಗರ ಮನ ಕಲಕುವಂತಿತ್ತು.
ಬೀದರ್ ಜಿಲ್ಲೆಯ ಚಿಟಗುಪ್ಪ ತಾಲೂಕಿನ ತಾಳಮಡಗಿ ಗ್ರಾಮದಲ್ಲಿರುವ ಬಸವರಾಜ್ ತಂದೆ ಅರ್ಜುನ್ ನಂದಗಾವ ಅವರ ಮನೆಗೆ ಬೆಂಕಿ ತಗುಲಿ ಜೋಳ, ಉಡುವ ಬಟ್ಟೆಬರೆ, ಹಣ ಮತ್ತು ಬಂಗಾರ- ಬೆಳ್ಳಿ ಸುಟ್ಟು ಕರಕಲಾಗಿವೆ . ಇವರೆಲ್ಲ ಕೂಲಿ ಕೆಲಸಕ್ಕಾಗಿ ಹೊರಗೆ ಹೋಗಿದ್ದರು.
ಮನೆಗೆ ಬೆಂಕಿ ತಗುಲಿದ್ದನ್ನು ನೋಡಿದ ಅಕ್ಕಪಕ್ಕದವರು ನೀರು ಹಾಕಿ ಬೆಂಕಿ ಆರಿಸಿದ್ದಾರೆ. ” ನಾವು ಕಡು ಬಡವರು. ನಮಗೆ ನಾಳೆ ಊಟ ಮಾಡಲು ಗತಿಯಿಲ್ಲ. ದಯವಿಟ್ಟು ನಮಗೆ ಸಹಾಯ ಮಾಡಿ. ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದೇವೆ.
ಮನೆಯಲ್ಲಿದ್ದ ಎಲ್ಲವೂ ಸುಟ್ಟು ಹೋಗಿವೆ . ಕೈ ಮುಗಿಯುತ್ತೇವೆ … ಸಹಾಯ ಮಾಡಿ ಎಂದು ಮನೆಮಂದಿ ಜನರನ್ನು ಬೇಡಿಕೊಳ್ಳುತ್ತಿರುವ ದೃಶ್ಯ ಅಯ್ಯೋ ಪಾಪ ಎನಿಸುವಂತಿತು.