News Karnataka Kannada
Thursday, May 09 2024
ಬೀದರ್

ಬೀದರ್: “ಮನೆ ಬೆಂಕಿಗಾಹುತಿ” ಕಣ್ಣೆದುರೇ ಹಣ, ಚಿನ್ನಾಭರಣ ಭಸ್ಮ- ಮುಗಿಲು ಮುಟ್ಟಿದ ರೋದನ

Bidar: 'House set on fire' cash, gold ornaments burnt in front of eyes
Photo Credit : News Kannada

ಬೀದರ್‌: ಮನೆಗೆ ಬೆಂಕಿ ತಗುಲಿ ಬೆಲೆಬಾಳುವ ವಸ್ತುಗಳು ಸುಟ್ಟು ಕರಕಲಾಗಿರುವುದನ್ನು ಕಂಡ ಮನೆ ಯಜಮಾನಿಯ ರೋದನ ನೋಡುಗರ ಮನ ಕಲಕುವಂತಿತ್ತು.

ಬೀದರ್ ಜಿಲ್ಲೆಯ ಚಿಟಗುಪ್ಪ ತಾಲೂಕಿನ ತಾಳಮಡಗಿ ಗ್ರಾಮದಲ್ಲಿರುವ ಬಸವರಾಜ್ ತಂದೆ ಅರ್ಜುನ್ ನಂದಗಾವ ಅವರ ಮನೆಗೆ ಬೆಂಕಿ ತಗುಲಿ ಜೋಳ, ಉಡುವ ಬಟ್ಟೆಬರೆ, ಹಣ ಮತ್ತು ಬಂಗಾರ- ಬೆಳ್ಳಿ ಸುಟ್ಟು ಕರಕಲಾಗಿವೆ . ಇವರೆಲ್ಲ ಕೂಲಿ ಕೆಲಸಕ್ಕಾಗಿ ಹೊರಗೆ ಹೋಗಿದ್ದರು.

ಮನೆಗೆ ಬೆಂಕಿ ತಗುಲಿದ್ದನ್ನು ನೋಡಿದ ಅಕ್ಕಪಕ್ಕದವರು ನೀರು ಹಾಕಿ ಬೆಂಕಿ ಆರಿಸಿದ್ದಾರೆ. ” ನಾವು ಕಡು ಬಡವರು. ನಮಗೆ ನಾಳೆ ಊಟ ಮಾಡಲು ಗತಿಯಿಲ್ಲ. ದಯವಿಟ್ಟು ನಮಗೆ ಸಹಾಯ ಮಾಡಿ. ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದೇವೆ.

ಮನೆಯಲ್ಲಿದ್ದ ಎಲ್ಲವೂ ಸುಟ್ಟು ಹೋಗಿವೆ . ಕೈ ಮುಗಿಯುತ್ತೇವೆ … ಸಹಾಯ ಮಾಡಿ ಎಂದು ಮನೆಮಂದಿ ಜನರನ್ನು ಬೇಡಿಕೊಳ್ಳುತ್ತಿರುವ ದೃಶ್ಯ ಅಯ್ಯೋ ಪಾಪ ಎನಿಸುವಂತಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು