News Karnataka Kannada
Thursday, May 09 2024
ಬೀದರ್

ಔರಾದ: ವಿಜಯ ಸಂಕಲ್ಪ ಯಾತ್ರೆಗೆ ಭವ್ಯ ಸ್ವಾಗತ

Aurad: A grand welcome to the Vijay Sankalp Yatra
Photo Credit : News Kannada

ಔರಾದ: ಬಿಜೆಪಿ ವಿಜಯ ಸಂಕಲ್ಪ ಯಾತ್ರಾ ರಥಕ್ಕೆ ಶನಿವಾರ ಔರಾದ ತಾಲೂಕಿನ ವಡಗಾಂವ ಗ್ರಾಮದಲ್ಲಿ ಸಹಸ್ರಾರು ಕಾರ್ಯಕರ್ತರು, ಮುಖಂಡರು ಭವ್ಯ ಮೆರವಣಿಗೆ ಮೂಲಕ ಅದ್ದೂರಿ ಸ್ವಾಗತ ಕೋರಿದರು.

ಭಾಲ್ಕಿಯಿಂದ ಆಗಮಿಸಿದ ಯಾತ್ರೆಗೆ ಗ್ರಾಮದ ಶರಣ ಬಸವ ಕಲ್ಯಾಣ ಮಂಟಪದಿಂದ, ಬಸವೇಶ್ವರ ಮಂದಿರ, ಅಂಬೇಡ್ಕರ್ ವೃತ, ವೀರಭದ್ರೇಶ್ವರ ಮಂದಿರದ ವರೆಗೆ ಬೃಹತ್ ರೋಡ್ ಶೋ ನಡೆಯಿತು.

ಯಾತ್ರೆಯುದ್ದಕ್ಕೂ ಬಿಜೆಪಿ ಧ್ವಜಗಳು ರಾರಾಜಿಸಿದವು. ಡಿಜೆ ಸೌಂಡ್‌ನೊಂದಿಗೆ ಯುವಕರು ಮೋದಿ ಮೋದಿ, ಬಿಜೆಪಿ ಬಿಜೆಪಿ ಎಂದು ಜೈಘೋಷ ಮೊಳಗಿಸಿದರು.

ಕುಂಭ ಹೊತ್ತ ಮಹಿಳೆಯರು, ಲಂಬಾಣಿ ಮಹಿಳೆಯರ ಕುಣಿತ, ಡೊಳ್ಳು, ವಾದ್ಯ ಮೇಳ ತಂಡಗಳ ಪ್ರದರ್ಶನ ಶೋಭೆ ನೀಡಿದವು. ರಥಯಾತ್ರೆ ವಾಹನದಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರ್, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಭಗವಂತ ಖೂಬಾ, ಸಚಿವ ಪ್ರಭು ಚೌಹಾಣ್, ಮಾಲೀಕಯ್ಯ ಗುತ್ತೇದಾರ, ಸೇರಿದಂತೆ ರಾಜ್ಯ ಮತ್ತು ಜಿಲ್ಲಾ ಮಟ್ಟದ ಜನಪ್ರತಿನಿಧಿಗಳು ಒಳಗೊಂಡು ಅನೇಕ ಗಣ್ಯರು ಬಿಜೆಪಿ ಕಾರ್ಯಕರ್ತರು ಭಾಗವಹಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು