ಚಿಟಗುಪ್ಪ: ಕಾಂಗ್ರೆಸ್ ಸರ್ಕಾರದಲ್ಲಿ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ. ಯಾವುದೇ ಪ್ರಗತಿ ಕಾಣುತ್ತಿಲ್ಲ ಎಂದು ಬಿಜೆಪಿ ಮುಖಂಡ ಸೂರ್ಯಕಾಂತ್ ಮಠಪತಿ ಹೇಳಿದರು.
ತಾಲ್ಲೂಕಿನ ಕುಡಂಬಲ್, ಮುದನಾಳ, ರಾಮಪುರ್, ವಳಖಿಂಡಿ ಗ್ರಾಮಗಳಲ್ಲಿ ವಿಧಾನ ಪರಿಷತ್ ಚುನಾವಣೆಯ ಪದವಿಧರ ಕ್ಷೇತ್ರದ ಪಕ್ಷದ ಅಭ್ಯರ್ಥಿ ಅಮರನಾಥ ಪಾಟೀಲ್ ಅವರ ಪರ ಮತಯಾಚಿಸಿ ಮಾತನಾಡಿದರು.
ಮುಖಂಡ ಮಲ್ಲಿಕಾರ್ಜುನ ಪಾಟೀಲ ಮಾತನಾಡಿ, ಪ್ರಜ್ಞಾವಂತ ಪದವಿಧರ ಮತದಾರರು ರಾಜ್ಯ ದೇಶದ ಸಮಗ್ರ ಪ್ರಗತಿ, ಅಂತರಾಷ್ಟ್ರಿಯ ಮಟ್ಟದಲ್ಲಿ ಭದ್ರತೆಯ ವಿಷಯ ಆಲೋಚಿಸಿ ಬಿಜೆಪಿ ಅಭ್ಯರ್ಥಿಗೆ ಮತಚಲಾಯಿಸಿ ವಿಜೇತರನ್ನಾಗಿ ಮಾಡಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಮುಖಂಡರಾದ ಸುಭಾಷ ಕುಂಬಾರ, ರಾಜಗೋಪಾ ಐನಾಪುರ್ ಅವರು ಮಾತನಾಡಿ, ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಬೊಕ್ಕಸ ದಿವಾಳಿಗೊಳಿಸಿದ ಕಾಂಗ್ರೆಸ್ ಸರ್ಕಾರ ಕೇವಲ ಅಧಿಕಾರದ ಗದ್ದುಗೆಗಾಗಿ ಮತದಾರರಿಗೆ ಆಮಿಷಗಳ ಯೋಜನೆ ರೂಪಿಸುತ್ತಿದೆ. ಇದರಿಂದ ಮುಂದಿನ ಪೀಳಿಗೆಯ ಮೇಲೆ ಬಹುದೊಡ್ಡ ಪರಿಣಾಮ ಬಿಳುತ್ತದೆ ಎಂದು ನುಡಿದರು. ಬೀರಪ್ಪ ಮಾರ್ತಾಂಡ, ವೀರಣ್ಣ ಭಂಡಾರಿ, ಶರಣಪ್ಪ, ಸಂಗಪ್ಪ ಕಟಗಿ, ಮುಕುಂದ್, ಸಿರಾಜ್ ಬಂದಗಿ ಇತರರು ಇದ್ದರು.