ನವಲಗುಂದ : ಉಮಚಗಿ ಗ್ರಾಮಕ್ಕೆ ಸುಡುಬಿಸಿಲನ್ನು ಲೆಕ್ಕಿಸದೆ ಸಚಿವ ಶಂಕರಪಾಟೀಲ್ ಮುನೇನಕೊಪ್ಪಪ್ರಚಾರ ನಡೆಸಿದರು. ಗ್ರಾಮಸ್ಥರು ಸಚಿವರಿಗೆ ಹೂಮಳೆ ಸುರಿಸಿ ಸ್ವಾಗತ ಕೋರಿದರು.
ಉಮಚಗಿ ಗ್ರಾಮಸ್ಥರ ಸಂಭ್ರಮ ಕಂಡು ಸಚಿವರು ಸಂತೋಷ ವ್ಯಕ್ತ ಪಡಿಸಿದರು. ಗ್ರಾಮದ ಪ್ರತಿ ಬೀದಿಗಳಲ್ಲಿ ಸಂಚರಿಸಿ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಶಿವನಗೌಡ ಪಾಟೀಲ್ , ಸುರಣಗಿ ವಕೀಲರು , ಅಜ್ಜಪ್ಪ ಹೊರಕೇರಿ , ವಾಸಪ್ಪ ಅಂಗಡಿ , ಶಿವಯೋಗಿ ಅರಳಿ , ಪ್ರವೀಣ್ ನಾಗರಹಳ್ಳಿ, ವೀರಣ್ಣ ಬಿರಾದರ ದೇಸಾಯಿ ,ಇನ್ನು ಅನೇಕ ಕಾರ್ಯಕರ್ತರು ಮುಖಂಡರು ಪ್ರಚಾರದಲ್ಲಿ ಭಾಗಿಯಾಗಿದ್ದರು.