ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರಾರ್ಥ ಅಂಗವಾಗಿ ಗುರುವಾರ ಬಿಜೆಪಿ ಯುವ ಮೋರ್ಚಾ ಸದಸ್ಯರೊಂದಿಗೆ ಬೆಳ್ಳಂಬೆಳಿಗ್ಗೆ ನಗರದ ವಿವಿಧೆಡೆ ವಾಯುವಿಹಾರಿಗಳನ್ನು ಭೇಟಿ ಮಾಡಿದ ಬಿಜೆಪಿ ಅಭ್ಯರ್ಥಿ ಡಾ. ಕ್ರಾಂತಿಕಿರಣ ಅವರು ಬಿರುಸಿನ ಮತಯಾಚನೆ ರು.
ನೆಹರು ಮೈದಾನ, ಅರವಿಂದ ನಗರ, ನೇಕಾರ ನಗರ ಗಿರಿಯಾಲ ರಸ್ತೆಯಲ್ಲಿ ಸಂಚರಿಸಿ ವಾಯುವಿಹಾರಿಗಳ ಭೇಟಿ ಮಾಡಿ ಅವರೊಂದಿಗೆ ಕ್ರಿಕೆಟ್ ಆಟವಾಡಿ, ಟೀ ಸೇವಿಸಿದ ಅಭ್ಯರ್ಥಿ ಡಾ. ಕ್ರಾಂತಿಕಿರಣ ಅವರು, ವಾಯುವಿಹಾರಿಗಳ ಅನುಕೂಲಕ್ಕಾಗಿ ಕ್ಷೇತ್ರ ವ್ಯಾಪ್ತಿಯಲ್ಲಿ ಸುಂದರವಾದ ಉದ್ಯಾನವನ, ವಾಕಿಂಗ್ ಪಾಥ್, ಓಪನ್ ಜಿಮ್ ಸೇರಿದಂತೆ ಮೂಲ ಸೌಲಭ್ಯಗಳಿಲ್ಲ. ಈ ಬಾರಿ ಕ್ಷೇತ್ರದ ಜನತೆ ಬದಲಾವಣೆ ಬಯಸಿ ಬಿಜೆಪಿಗೆ ಬೆಂಬಲಿಸಿ ಆಶೀರ್ವದಿಸಿ ಪೂರ್ವದಲ್ಲಿ ಕಮಲ ಅರಳಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಯುವ ಮೋರ್ಚಾದ ಪ್ರಮುಖರಾದ ಶಿವಯ್ಯ ಹಿರೇಮಠ, ಮಂಜು ಕಲಾಲ್, ಕಿರಣ ಕುಲಕರ್ಣಿ, ಚೇತನ್ ಹಿರೇಮಠ, ಅಮೃತ ದಾಮೋದರ್, ಹರೀಶ ಹಳ್ಳಿಕೇರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.