News Karnataka Kannada
Wednesday, May 01 2024
ಹುಬ್ಬಳ್ಳಿ-ಧಾರವಾಡ

ಮಾಜಿ ಸಿಎಂ ಕುಮಾರಸ್ವಾಮಿಗೆ ತಿರುಗೇಟು ನೀಡಿದ ಹಾಲಪ್ಪ ಆಚಾರ್

Halappa Achar hits back at former CM HD Kumaraswamy
Photo Credit : News Kannada

ಧಾರವಾಡ: ಮೀಸಲಾತಿ ಎನ್ನುವುದು ಹುಡುಗಾಟ ವಿಚಾರವಾಗಿದೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಅವರು ತಿರುಗೇಟು ನೀಡಿದ್ದಾರೆ.

ಧಾರವಾಡದಲ್ಲಿ ಮಾತನಾಡಿದ ಅವರು, ಸದಾಶಿವ ಆಯೋಗದ ವರದಿ ಸಿದ್ಧವಾಗಿ 25 ವರ್ಷ ಆಗಿತ್ತು. ಈ ವರದಿ ಧೂಳು ಹಿಡಿದಿತ್ತು. ಮೀಸಲಾತಿ ಕೊಡಬಾರದು ಎಂದು ಮೊದಲಿನವರಿಗೆ ಯಾರಾದರೂ ಹೇಳಿದ್ದರಾ? ಆ ವರದಿ ತರಿಸಿಕೊಂಡು ಹಾಗೇ ಇಟ್ಟಿದ್ದರು. ಆದರೆ, ನಮ್ಮ ಸಿಎಂ ಬಹಳ ಧೈರ್ಯದಿಂದ ಅದರ ಅನುಷ್ಠಾನಕ್ಕೆ ಹೊರಟಿದ್ದಾರೆ. ಮೀಸಲಾತಿಗೆ ಹೋರಾಟ ಮಾಡಿದವರೆಲ್ಲ ಸಂತೋಷದಿಂದ ಒಪ್ಪಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಅನೇಕರು ಅನೇಕ ರೀತಿ ಮಾತನಾಡುತ್ತಿದ್ದಾರೆ. ತಾವೂ ವರದಿ ಅನುಷ್ಠಾನ ಮಾಡಲಿಲ್ಲ ಹಾಗಂತ ಉಳಿದವರೂ ಮಾಡಬಾರದಾ? ಅನಾವಶ್ಯಕವಾಗಿ ಕಾಲು ಎಳೆಯುವ ಪ್ರವೃತ್ತಿ ಇವರದ್ದು. ನಾವು ಯಾರ ಮೀಸಲಾತಿಯನ್ನು ಕಸಿದುಕೊಂಡಿಲ್ಲ. ಸಂವಿಧಾನಾತ್ಮಕವಾಗಿ ಯಾರ ಮೀಸಲಾತಿಯನ್ನೂ ಕಸಿದುಕೊಳ್ಳಲು ಆಗುವುದಿಲ್ಲ. ಯಾರ ಹಕ್ಕನ್ನೂ ನಾವು ಕಸಿದುಕೊಂಡಿಲ್ಲ ಎಂದರು

ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮಲ್ಲಿ ಕಾಂಗ್ರೆಸ್‌ನವರ ಹಾಗೆ ಅಭ್ಯರ್ಥಿಗಳಲ್ಲಿ ಭಿನ್ನಾಭಿಪ್ರಾಯವಿಲ್ಲ. ಅವರಲ್ಲಿ ನಾಯಕರೇ ಬಡಿದಾಡುತ್ತಿದ್ದಾರೆ. ಸಿದ್ದರಾಮಯ್ಯ ಒಮ್ಮೆ ಬಾದಾಮಿ ಎನ್ನುತ್ತಾರೆ ಒಮ್ಮೆ ಮೈಸೂರು, ಕೊಪ್ಪಳ ಎನ್ನುತ್ತಾರೆ ಎಂದು ಲೇವಡಿ ಮಾಡಿದರು.

ನಮ್ಮಲ್ಲಿ ಯಾವ ಗುಜರಾತ್ ಮಾದರಿಯ ಟಿಕೆಟ್ ಹಂಚಿಕೆ ನಡೆಯುವುದಿಲ್ಲ. ಸಹಜವಾಗಿ ಅಭ್ಯರ್ಥಿಗಳ ಮಧ್ಯೆ ಟಿಕೆಟ್‌ಗಾಗಿ ಪೈಪೋಟಿ ಇರುತ್ತದೆ. ಟಿಕೆಟ್ ಕೇಳುವುದು ತಪ್ಪಲ್ಲ. ರಾಷ್ಟ್ರೀಯ ಹಾಗೂ ರಾಜ್ಯ ನಾಯಕರು ಅಳೆದು ತೂಗಿ ಟಿಕೆಟ್ ಕೊಟ್ಟಿರುತ್ತಾರೆ. ಈ ಬಾರಿಯೂ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ನಾನೇ ಧಾರವಾಡ ಜಿಲ್ಲಾ ಮಂತ್ರಿಯಾಗಿ ಮತ್ತೆ ಬರುತ್ತೇನೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು