News Karnataka Kannada
Monday, May 06 2024
ವಿಶೇಷ

ಅಮರನಾಥ ಯಾತ್ರಾರ್ಥಿಗಳ ಮೊದಲ ಬ್ಯಾಚ್‌ ನ ಪ್ರಯಾಣಕ್ಕೆ ಚಾಲನೆ

Amarnath Yatra suspended for third consecutive day
Photo Credit : IANS

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಶುಕ್ರವಾರ ಜಮ್ಮು ನಗರದಿಂದ ಅಮರನಾಥ ಯಾತ್ರಾರ್ಥಿಗಳ ಮೊದಲ ಬ್ಯಾಚ್‌ಗೆ ಚಾಲನೆ ನೀಡಿದರು.

ಸುಮಾರು 3,300 ಯಾತ್ರಾರ್ಥಿಗಳನ್ನು ಒಳಗೊಂಡ ಮೊದಲ ತಂಡವು ಭಗವತಿ ನಗರ ಯಾತ್ರಿ ನಿವಾಸದಿಂದ 159 ಬೆಂಗಾವಲು ವಾಹನಗಳಲ್ಲಿ ಕಾಶ್ಮೀರ ಕಣಿವೆಯ ಬಲ್ಟಾಲ್ ಮತ್ತು ಪಹಲ್ಗಾಮ್ ಮೂಲ ಶಿಬಿರಗಳಿಗೆ ತೆರಳಿತು. 62 ದಿನಗಳ ಅಮರನಾಥ ಯಾತ್ರೆ ಶನಿವಾರ ಆರಂಭವಾಗಲಿದ್ದು, ಶ್ರಾವಣ ಪೂರ್ಣಿಮಾ ಹಬ್ಬದೊಂದಿಗೆ ಆಗಸ್ಟ್ 31 ರಂದು ಕೊನೆಗೊಳ್ಳಲಿದೆ.

ಗುಹಾ ದೇಗುಲವನ್ನು ಸಮೀಪಿಸಲು ಎರಡು ಮಾರ್ಗಗಳಿದ್ದು, ಗಂದರ್‌ಬಾಲ್ ಜಿಲ್ಲೆಯ ಮೂಲಕ 13 ಕಿಮೀ ಉದ್ದದ ಮಾರ್ಗದಲ್ಲಿ ಸಾಗಬಹುದು. ಅದೇ ರೀತಿ ಅನಂತನಾಗ್‌ನಲ್ಲಿ 43 ಕಿಮೀ ಉದ್ದದ ಪಹಲ್ಗಾಮ್ ಮಾರ್ಗದಲ್ಲಿ ಸಾಗಬಹುದು. ಸಮುದ್ರ ಮಟ್ಟದಿಂದ 3,888 ಮೀಟರ್ ಎತ್ತರದಲ್ಲಿ ನೆಲೆಗೊಂಡಿರುವ ಈ ಗುಹೆ ದೇವಾಲಯವು ಭಕ್ತರ ಪ್ರಕಾರ ಶಿವನ ಪೌರಾಣಿಕ ಶಕ್ತಿಯನ್ನು ಸಂಕೇತಿಸುವ ಪವಿತ್ರ ‘ಲಿಂಗ’ ಎಂಬ ಐಸ್ ಸ್ಟಾಲಗ್ಮೈಟ್ ರಚನೆ ಹೊಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು