News Karnataka Kannada
Sunday, April 28 2024
ಅಂಕಣ

ಮನೆ ಮಂದಿಯವರ ಯೋಚನೆ ಒಂದೇ ರೀತಿಯಾಗಿರಬೇಕು

The thinking of the householder should be the same.
Photo Credit : Pixabay

ಒಂದು ಮನೆಯಲ್ಲಿ ವಾಸಮಾಡುವ ಎಲ್ಲಾ ಸದಸ್ಯರ ಮನಸ್ಸು ಒಂದೇ ತರ ಯೋಚನೆ ಮಾಡುವುದಿಲ್ಲ. ಪ್ರತಿಯೊಬ್ಬರು ಕೂಡ ಭಿನ್ನ ವ್ಯಕ್ತಿಗಳು ಆಗಿರುವುದರಿಂದ ಅವರು ಯೋಚನೆ ಮಾಡುವ ರೀತಿಯೆ ಬೇರೆನೆ ಆಗಿದೆ.ಹಾಗಾಗಿ ಕೆಲವೊಮ್ಮೆ ಮನೆಯ ವಾತಾವರಣದ ಮೇಲೆ ಪರಿಣಾಮ ಬೀಳುತ್ತದೆ.

ಈ ಭಿನ್ನ ವ್ಯಕ್ತಿಗಳು ಕೆಲವೊಮ್ಮೆ ತಮ್ಮ ಇಚ್ಛೆಗೆ ಅನುಸಾರವಾಗಿ ನಡೆದು ಕೊಳ್ಳುತ್ತಾರೆ. ಇದು ಕೆಲವೊಮ್ಮೆ ಮನೆಯ ವಾತಾವರಣವನ್ನು ಕೆಡಿಸುವ ಸಾಧ್ಯತೆ ಇದೆ.ಇದು ಒಳ್ಳೆಯ ರೀತಿಯಲ್ಲಿ ಆಗಿರಬಹುದು ಅಥವಾ ಕೆಟ್ಟ ರೀತಿಯಲ್ಲಿಯೂ ಆಗಿರಬಹುದು.

ತಮ್ಮ ಇಷ್ಟ, ತಮ್ಮ ಮಾತು, ಅವಶ್ಯಕತೆ ಹೀಗೆ ಪ್ರತಿಯೊಂದು ವಿಷಯದಲ್ಲಿ ತಮ್ಮ ಮೊಂಡುವಾದವನ್ನು ಎಲ್ಲರ ಮುಂದೆ ಇಡುತ್ತಾರೆ. ಇದರಿಂದ ತಮ್ಮ ವಾದದಿಂದ ಮೇಲೂ ಗೈ ಸಾಧಿಸಲು ಪ್ರಯತ್ನಿಸುತ್ತಾರೆ.

ಪ್ರತಿಯೊಬ್ಬ ವ್ಯಕ್ತಿಯ ಸ್ವಭಾವ, ಗುಣ ಬೇರೆಯೇ ಆಗಿರುತ್ತದೆ. ಕೆಲವರು ಶಾಂತ,ಇನ್ನು ಕೆಲವರು ವಿರುದ್ಧ ಎಂಬಂತೆ ಸಿಡುಕಾಗಿರುತ್ತಾರೆ. ವ್ಯಕ್ತಿಯ ಸಿಡುಕುತನಕ್ಕೆ ಕಾರಣ ಹಲವು ಆದರೆ ಅದನ್ನು ಅರ್ಥ ಮಾಡಿಕೊಳ್ಳುವಷ್ಟು ಸೌಜನ್ಯ ಎಲ್ಲರಲೂ ಇರುವುದಿಲ್ಲ. ಒಂದು ಮನೆಯ ಎಂದರೆ ಅಲ್ಲಿ ಎಲ್ಲರೂ ಸಮಾನಾರು. ಇಲ್ಲಿ ಪ್ರತಿಯೊಬ್ಬರಿಗೂ ಪ್ರಾಶಸ್ಯ ನೀಡಬೇಕು. ಅವರ ಬೇಕು ಬೇಡ, ಇಷ್ಟ ಕಷ್ಟ ಹೀಗೆ ಹತ್ತು ಹಲವು ವಿಚಾರಗಳನ್ನು ಅರಿತರೆ ಉತ್ತಮ. ಯಾವುದೇ ರೀತಿಯ ಮನಸ್ಥಾಪಕ್ಕೆ ಅವಕಾಶ ಇರುವುದಿಲ್ಲ.

ಒಂದು ವೇಳೆ ಮನೆಯವರು ಸದಸ್ಯನ ಮನಸ್ಸುನ್ನು ಅರಿಯುವಲ್ಲಿ ಯಶಸ್ವಿಯಾಗದಿದಲ್ಲಿ ಮನೆಯ ಒಗ್ಗಟ್ಟಿನ ಬೇರಿಗೆ ಕೊಡಲಿ ಏಟು ನೀಡಿದಂತೆ ಆಗುತ್ತದೆ. ಮನೆಯಲ್ಲಿ ಸಣ್ಣಪುಟ್ಟ ಕಲಹಗಳು ನಡೆದೆ ನಡೆಯುತ್ತದೆ.ಅದನ್ನು ಹೆಚ್ಚಾಗಲು ಅವಕಾಶ ನೀಡಿದೆ. ಸಣ್ಣದರಲ್ಲಿಯೇ ಅದನ್ನು ತಣ್ಣಾಗಾಗಿಸಬೇಕು. ಆಗಲೇ ಮನೆಯು ಬೃಂದಾವನ ಆಗುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
29837

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು