Showing 20 of 47 posts • Page 1 of 3
2028ರಲ್ಲಿ ಶತಮಾನೋತ್ಸವವನ್ನು ಆಚರಿಸಲಿರುವ ಐತಿಹಾಸಿಕ ತುಳುವ ಮಹಾಸಭೆಯ ಜಾಗತಿಕ ಸಂಘಟನೆಯಾದ ತುಳುವ ಮಹಾಸಭೆ ಇಂಟರ್ನ್ಯಾಷನಲ್ನ ಆಸ್ಟ್ರೇಲಿಯಾದ ಸಿಡ್ನಿ ಘಟಕದ ಅಧ್ಯಕ್ಷರಾಗಿ ಖ್ಯಾತ ಸಮಾಜಸೇವಕ ಹಾಗೂ ತುಳು ಭಾಷೆ-ಸಂಸ್ಕೃತಿಯ ಅಭಿಮಾನಿ ಶ್ರೀ ಸುರೇಶ್ ಪೂಂಜ ಅವರನ್ನು ನೇಮಕ ಮಾಡಲಾಗಿದೆ.
ದೇಶದ ಮಹೋನ್ನತ ಮಹಾಕಾವ್ಯ ರಾಮಾಯಣವನ್ನು ಇಷ್ಟ ಪಡದವರು ಯಾರು ಇಲ್ಲ.
ಉರ್ವಾದ ಹೆಮ್ಮೆಯ ಧಾರ್ಮಿಕ ಗುರು, ದಾನಶೂರ, ಶಿಕ್ಷಣಪ್ರೇಮಿ ಹಾಗೂ ಮಾನವತೆಯ ನಿಸ್ವಾರ್ಥ ಸೇವಕನಾಗಿ ಗುರುತಿಸಿಕೊಂಡಿದ್ದ ವಂದನೀಯ ಮೊನ್ಸಿಂಜೊರ್ ಲೆಸ್ಲಿ ಎಫ್. ಶೆಣೊಯ್ ಅವರು ಮೇ 24ರಂದು ಭಾನುವಾರ ತಮ್ಮ 79ನೇ ವಯಸ್ಸಿನಲ್ಲಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಕೇವಲ 8 ವರ್ಷ ವಯಸ್ಸಿನಲ್ಲಿ, ಓಂ ಎನ್. ಗಮನ ಮತ್ತು ಶಿಸ್ತಿನ ಗಮನಾರ್ಹ ಸಾಧನೆಯೊಂದಿಗೆ ಅಂತರರಾಷ್ಟ್ರೀಯ ದಾಖಲೆಗಳ ಪುಸ್ತಕಕ್ಕೆ ಪ್ರವೇಶಿಸಿದ್ದಾರೆ.
ಜೆಪ್ಪುವಿನ ಸಂತ ಅಂತೋನಿ ಚಾರಿಟಿ ಸಂಸ್ಥೆಯ ವತಿಯಿಂದ, ಆಶ್ರಮದ ಅಭಿವೃದ್ಧಿಗೆ ಸಹಕರಿಸುತ್ತಿರುವ ದಾನಿಗಳು ಮತ್ತು ಹಿತೈಷಿಗಳಿಗೆ ಕೃತಜ್ಞತೆ ಸಲ್ಲಿಸುವ ‘ದಾನಿಗಳ ದಿನಾಚರಣೆ’ಯನ್ನು 2026ರ ಏಪ್ರಿಲ್ 26ರಂದು ಆದಿವಾರ ‘ಸಂಭ್ರಮ’ ಸಭಾಂಗಣದಲ್ಲಿ ಆಚರಿಸಲಾಯಿತು.
ಮಂಗಳೂರು ಧರ್ಮಕ್ಷೇತ್ರದ ಇತಿಹಾಸದಲ್ಲಿ ಒಂದು ಮಹತ್ವದ ಘಟನೆಯಾಗಿ, ಐವರು ಸೇವಾದರ್ಶಿಗಳು ಪರಮ ಪೂಜ್ಯ ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ, ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಇವರಿಂದ ಯಾಜಕ ದೀಕ್ಷೆಯನ್ನು ಪಡೆದರು.
ನಿರ್ಭೀತ ಹಿಂದೂ ತಾಯಿಯ ಮೇಲೆ ಬಾಂಗ್ಲಾದೇಶದ ಇಸ್ಲಾಂವಾದಿಗಳಿಂದ ಕಲ್ಲೆಸೆದು ಹಲ್ಲೆ ಮಾಡಲಾಗಿದೆ. ತನ್ನ ಮುಗ್ಧ ಮಕ್ಕಳನ್ನು ಮತ್ತು ಮನೆಯನ್ನು ರಕ್ಷಿಸಲು ಅವಳು ಆಯುಧ ಹಿಡಿದು ಹೋರಾಡಿದ ದೃಶ್ಯ ಇದೀಗ ವೈರಲ್ ಆಗಿದೆ. ಇಸ್ಲಾಂಗೆ ಮತಾಂತರಗೊಳ್ಳಲು ನಿರಾಕರಿಸಿದ ನಂತರ ಈ ಘಟನೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.
ಫೋಟೋ ತೆಗೆದುಕೊಳ್ಳುವ ಉದ್ದೇಶದಿಂದ ಮಹಿಳೆಯೊಬ್ಬರು ತಮ್ಮ ಹಿಜಾಬ್ ತೆಗೆದಿದ್ದಕ್ಕೆ, ಅವರ ಪತಿಯೇ ಸಾರ್ವಜನಿಕವಾಗಿ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ನಡೆದಿದೆ.
ತುಳುನಾಡಿನ ದೈವಾರಾಧನೆ ಎಂಬುದು ಕೇವಲ ಆಚರಣೆಯಲ್ಲ, ಅದೊಂದು ಅಪಾರ ನಂಬಿಕೆ ಮತ್ತು ಶಿಸ್ತಿನ ಪದ್ಧತಿ. ಇತ್ತೀಚೆಗೆ ದೈವದ ನೇಮೋತ್ಸವಗಳ ವೇಳೆ ವಿಡಿಯೋ ಮಾಡುವ ಮತ್ತು ಫೋಟೋ ತೆಗೆಯುವ ಪ್ರವೃತ್ತಿ ಹೆಚ್ಚಾಗುತ್ತಿದ್ದು, ಇದು ದೈವದ ಅವಕೃಪೆಗೆ ಕಾರಣವಾಗುತ್ತಿದೆ ಎಂಬುದಕ್ಕೆ ಸಾಕ್ಷಿಯಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಯುಎಇ ನಲ್ಲಿ ಕಳೆದ 23 ವರ್ಷಗಳಿಂದ ಕನ್ನಡ ಪರಸೇವೆಗಳನ್ನು ಮಾಡುತ್ತಾ ವಿಶೇಷ ಮತ್ತು ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ಅನಿವಾಸಿ ಕನ್ನಡಿಗರಿಗೆ ಆಯೋಜನೆ ಮಾಡುವ ಹೆಮ್ಮಯ ಸಂಸ್ಥೆ ಕರ್ನಾಟಕ ಸಂಘ ಶಾರ್ಜಾ.
ಸೌದಿ ಸರ್ಕಾರವು, ಇಕ್ಕಾಮಾ (Iqama) ಅಥವಾ ಮಾನ್ಯ ವೀಸಾ ಇಲ್ಲದೇ ದೇಶದಲ್ಲಿ ಉಳಿದಿರುವ ವಿದೇಶಿಗರಿಗೆ Exit Facilitation / Amnesty ಎಂಬ ವಿಶೇಷ ಅವಕಾಶವನ್ನು ಕೆಲ ಸಮಯಗಳಲ್ಲಿ ನೀಡುತ್ತದೆ.
1986, ಫೆಬ್ರವರಿ 6, ರೋಮನ್ ಕ್ಯಾಥೋಲಿಕ್ ಚರ್ಚಿನ ಪರಮಗುರು, ಕ್ರೈಸ್ತ ಸಮುದಾಯದ ಜಗದ್ಗುರು 2 ನೇ ಜೋನ್ ಪಾವ್ಲ್ ಅವರ ಪಾದಸ್ಪರ್ಶದಿಂದ ಪಾವನವಾದ ಪುಟ್ಟ ಊರು ಕರ್ನಾಟಕದ ಮಂಗಳೂರಿನ ನಮ್ಮ ಹೆಮ್ಮಯ ಬಜ್ಪೆ. ಇತಿಹಾಸದ ಆ ಅವಿಸ್ಮರಣೀಯ ದಿನ ಇಂದಿಗೂ ಬಜ್ಪೆಯ ನಾಗರಿಕರಿಗೆ ಜೀವಮಾನದ ಮರೆಯಲಾಗದ ದಿನವಾಗಿ ಉಳಿದಿದೆ.
ಎಸ್.ಎಸ್.ವಿ.ಪಿ. ಎಂದು ಜನಪ್ರಿಯವಾಗಿರುವ ಅಂತರಾಷ್ಟ್ರೀಯ ಸೇವಾ ಸಂಸ್ಥೆ ಸೈಂಟ್ ವಿನ್ಸೆಂಟ್ ಡಿ ಪಾವ್ಲ್ ಸೊಸೈಟಿ, ಮಂಗಳೂರು ಕ್ಯಾಥೊಲಿಕ್ ಧರ್ಮಸಭೆಯಲ್ಲಿ ತನ್ನ ಅಸ್ತಿತ್ವದ ನೂರು ವರ್ಷಗಳ ಸಂಭ್ರಮವನ್ನು ಆಚರಿಸುತ್ತಿದೆ.
ಕೊಂಕಣಿ ಲೇಖಕ್ ಸಂಘ್ ಕರ್ನಾಟಕ, ಕೊಂಕಣಿ ಭಾಷೆ ಮತ್ತು ಸಾಹಿತ್ಯವನ್ನು ಉತ್ತೇಜಿಸಿ ಬೆಳೆಸುವ ಉದ್ದೇಶದಿಂದ 2018ರಲ್ಲಿ ಆರಂಭಗೊಂಡಿತು. 2022ರಲ್ಲಿ ಕೊಂಕಣಿ ಸಾಹಿತ್ಯಕ್ಕೆ ವಿಶೇಷ ಕೊಡುಗೆ ನೀಡಿದ ಲೇಖಕರನ್ನು ಆಯ್ಕೆ ಮಾಡಿ ಗೌರವಿಸಲು ಕೊಂಕಣಿ ಲೇಖಕ್ ಸಂಘ್ ನಿರ್ಧರಿಸಿತು.
ಧರ್ಮಕ್ಷೇತ್ರದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ಜೆಪ್ಪು ಸಂತ ಅಂತೋನಿ ಡಿವೋಷನ್ ಟ್ರಸ್ಟ್ ವತಿಯಿಂದ, ಕೇವಲ ಸಂತ ಅಂತೋನಿಯವರ ಭಕ್ತಿಗೀತೆಗಳಿಗೆ ಮೀಸಲಾದ ‘ಗಾ ತು ಜಿಬೆ(ಹಾಡು ಓ ನಾಲಗೆಯೇ) ಎಂಬ ಬೃಹತ್ ಧರ್ಮಕ್ಷೇತ್ರ ಮಟ್ಟದ ಕೊಂಕಣಿ ಸಮೂಹ ಗಾಯನ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಈ ಸ್ಪರ್ಧೆಯು 2026ರ ಜನವರಿ 18, ಭಾನುವಾರ ಜೆಪ್ಪು ಸಂತ ಅಂತೋನಿ ಆಶ್ರಮದಲ್ಲಿ ನಡೆಯಲಿದೆ.
ಬಿಕರ್ಣಕಟ್ಟೆಯ ಬಾಲ ಯೇಸು ದೇವಾಲಯದಲ್ಲಿ ಜನವರಿ 14ರಂದು ವಾರ್ಷಿಕ ಹಬ್ಬವನ್ನು ಭಕ್ತಿಭಾವ ಮತ್ತು ಧಾರ್ಮಿಕ ಉತ್ಸಾಹದೊಂದಿಗೆ ಆಚರಿಸಲಾಯಿತು.
ಬಾಲ ಯೇಸುವಿನ ವಾರ್ಷಿಕ ಮಹೋತ್ಸವದ ಸಿದ್ಧತೆಯ ನೋವೆನಾದ ಮೂರನೇ ದಿನದಂದು, ಬಿಕರ್ನಕಟ್ಟೆಯ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ವಿಶ್ವ ಪರಿಸರ ದಿನವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಬಂಟರ ಯಾನೆ ನಾಡವರ ಮಾತೃ ಸಂಘದಿಂದ ಇತ್ತೀಚೆಗೆ ನಿಧನರಾದ ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ವಿನಯ ಹೆಗ್ಡೆಯವರಿಗೆ ಶ್ರದ್ದಾಂಜಲಿ ಸಭೆ ಮತ್ತು ಪ್ರಾರ್ಥನಾ ಸಭೆ ಜನವರಿ 9 ರಂದು ಶುಕ್ರವಾರ ಸಂಜೆ 5 ಗಂಟೆಗೆ ಬಂಟ್ಸ್ ಹಾಸ್ಟೇಲ್ ಶ್ರೀ ರಾಮಕೃಷ್ಣ ಕಾಲೇಜು ಬಳಿ ಇರುವ ಶ್ರೀಮತಿ ಗೀತಾ ಎಸ್ ಎಂ ಶೆಟ್ಟಿ ಸಭಾಂಗಣದಲ್ಲಿ ನಡೆಯಲಿದೆ.
ಪ್ರಸಿದ್ಧ ಕಲಾವಿದ ಹಾಗೂ ಹಿರಿಯ ಕಲಾಶಿಕ್ಷಕ ಸಯ್ಯದ್ ಆಸಿಫ್ ಅಲಿ (54) ಅವರು ಸೋಮವಾರ, ಜನವರಿ 5, 2026ರ ಮಧ್ಯಾಹ್ನ ನಗರದ ಅಳಕೆಯಲ್ಲಿರುವ ಮಹಾಲಸಾ ದೃಶ್ಯಕಲಾ ಕಾಲೇಜಿನಲ್ಲಿ ಕರ್ತವ್ಯದಲ್ಲಿದ್ದ ಸಂದರ್ಭ ಹಠಾತ್ ಹೃದಯಾಘಾತದಿಂದ ನಿಧನರಾದರು.
ಸುಂದರ ಕೊಡಗಿನ ಮುಖ್ಯಪಟ್ಟಣ ಮಂಜಿನ ನಗರಿ ಮಡಿಕೇರಿಯ ಹೃದಯ ಭಾಗದಲ್ಲಿರುವ ಶ್ರೀ ಓಂಕಾರೇಶ್ವರ ದೇವಾಲಯದ ಐತಿಹಾಸಿಕ ಚಿತ್ರಕಥಾ ಪುಸ್ತಕ 2026 ಜನವರಿ 5ನೇ ತಾರೀಕು ಸೋಮವಾರ ಪೂರ್ವಾಹ್ನ ಮಡಿಕೇರಿಯಲ್ಲಿರುವ, ಶ್ರೀ ಓಂಕಾರೇಶ್ವರ ದೇವರ ಸನ್ನಿಧಾನದಲ್ಲಿ ಪೂಜಾ ವಿದಿ ವಿಧಾನಗಳೊಂದಿಗೆ ಲೋಕಾರ್ಪಣೆಗೊಂಡಿತು.