News Karnataka Kannada
Thursday, May 02 2024
ವಿದೇಶ

ಬಾಂಗ್ಲಾದಲ್ಲಿ ಮಳೆಗೆ ಜನಜೀವನ ತತ್ತರ: ಭೀಕರ ಪ್ರವಾಹದಲ್ಲಿ ಸಿಲುಕಿದ 20 ಲಕ್ಷ ಜನ

THIRUVANANTHAPURAM: Five killed in heavy rains in Kerala
Photo Credit : Wikimedia

ಬಾಂಗ್ಲಾದೇಶ:  ಈಶಾನ್ಯ ಮತ್ತು ಉತ್ತರ ತ್ಸಿಲ್ಹೆಟ್‌ ಪ್ರದೇಶದಲ್ಲಿ ಅಬ್ಬರಿಸುತ್ತಿರುವ ಮಳೆಗೆ ಜನಜೀವನ ತತ್ತರಿಸಿದೆ. ಸುಮಾರು 20 ಲಕ್ಷಕ್ಕೂ ಹೆಚ್ಚಿನ ಜನರು ಪ್ರವಾಹಕ್ಕೆ ಸಿಲುಕಿದ್ದು ಅವರ ರಕ್ಷಣೆಗೆ ರಕ್ಷಣಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿವೆ.

ಭಾರೀ ಮಳೆಯಿಂದ ಉಕ್ಕಿಹರಿಯುತ್ತಿರುವ ಬಾಂಗ್ಲಾದೇಶದ ನದಿಗಳು ಭೀಕರ ಪ್ರವಾಹಕ್ಕೆ ಕಾರಣವಾಗಿವೆ, ಸುಮಾರು 20 ಲಕ್ಷ ಜನರು ನಿರಾಶ್ರಿತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇಶದ ಈಶಾನ್ಯದಲ್ಲಿ ಹರಿಯುತ್ತಿರುವ ಪ್ರವಾಹದ ನೀರು ಬರಾಕ್ ನದಿಯ ಪ್ರಮುಖ ಒಡ್ಡುಗಳನ್ನು ಮುರಿದು, ಬಾಂಗ್ಲಾದೇಶದ ಝಕಿಗಂಜ್‌ನಲ್ಲಿ ಕನಿಷ್ಠ 100 ಹಳ್ಳಿಗಳನ್ನು ಮುಳುಗಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಈಶಾನ್ಯ ಜಿಲ್ಲೆಗಳಾದ ಸುನಮ್‌ಗಂಜ್ ಮತ್ತು ಸಿಲ್ಹೆಟ್ ಪ್ರವಾಹಕ್ಕೆ ತತ್ತರಿಸಿದ್ದು ಪರಿಹಾರ ಕಾರ್ಯಾಚೆನೆಗೆ ಸೈನಿಕರನ್ನು ನಿಯೋಜಿಸಲಾಗಿದೆ, ಅಲ್ಲಿ ಸಾವಿರಾರು ಮನೆಗಳು ಮುಳುಗಿವೆ ಮತ್ತು ವಿದ್ಯುತ್ ಕಡಿತಗೊಂಡಿದೆ. ಪ್ರವಾಹದಿಂದ ಈ ವಾರ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ. 50,000 ಕುಟುಂಬಗಳು ವಿದ್ಯುತ್ ಇಲ್ಲದೆ ಪರದಾಡುತ್ತಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು