News Karnataka Kannada
Friday, May 10 2024
ಗುಜರಾತ್

ಭಾರತವು ತನ್ನ ಆಧುನಿಕ ಆಶಯಗಳೊಂದಿಗೆ ಪ್ರಾಚೀನ ಅಸ್ಮಿತೆಯನ್ನು ಜೀವಿಸುತ್ತಿದೆ: ಮೋದಿ

Uttar Pradesh: PM to visit Varanasi today, launch various projects
Photo Credit : News Kannada

ಗುಜರಾತ್: “ನವ ಭಾರತವು ತನ್ನ ಆಧುನಿಕ ಆಶಯಗಳೊಂದಿಗೆ ಪ್ರಾಚೀನ ಅಸ್ಮಿತೆಯನ್ನು ಜೀವಿಸುತ್ತಿದೆ ಮತ್ತು ತನ್ನ ಪರಂಪರೆಯ ಬಗ್ಗೆ ಹೆಮ್ಮೆಪಡುತ್ತಿದೆ. ಇಂದು ಭಾರತದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ವೈಭವವನ್ನು ಮರುಸ್ಥಾಪಿಸಲಾಗುತ್ತಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಗುಜರಾತಿನ ಪಂಚಮಹಲ್ ಜಿಲ್ಲೆಯ ಪಾವಗಡ ಬೆಟ್ಟದ ಮೇಲೆ ಪುನರಾಭಿವೃದ್ಧಿ ಮಾಡಲಾದ ಕಾಳಿಕಾ ಮಾತಾ ದೇವಾಲಯವನ್ನು ಪ್ರಧಾನಿ ಮೋದಿ ಶನಿವಾರ ಉದ್ಘಾಟಿಸಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ದೇವಸ್ಥಾನದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು “ಇಂದು, ಶತಮಾನಗಳ ನಂತರ, ಪಾವಗಡ ದೇವಸ್ಥಾನದ ಮೇಲ್ಭಾಗದಲ್ಲಿ ಮತ್ತೊಮ್ಮೆ ಧ್ವಜವನ್ನು ಹಾರಿಸಲಾಗಿದೆ, ಮೇಲ್ಭಾಗದಲ್ಲಿರುವ ಈ ಧ್ವಜವು ನಮ್ಮ ನಂಬಿಕೆ ಮತ್ತು ಆಧ್ಯಾತ್ಮಿಕತೆಯ ಸಂಕೇತವಾಗಿದೆ. ಶತಮಾನಗಳು ಮತ್ತು ಯುಗಗಳ ಬದಲಾವಣೆಗಳ ಹೊರತಾಗಿಯೂ, ನಂಬಿಕೆಯು ಶಾಶ್ವತವಾಗಿ ಉಳಿದಿದೆ. ಇಂದು ಭಾರತದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ವೈಭವವನ್ನು ಪುನಃಸ್ಥಾಪಿಸಲಾಗುತ್ತಿದೆ. ಇಂದು ನವ ಭಾರತವು ತನ್ನ ಆಧುನಿಕ ಆಕಾಂಕ್ಷೆಗಳೊಂದಿಗೆ ತನ್ನ ಪ್ರಾಚೀನ ಗುರುತನ್ನು ಜೀವಿಸುತ್ತಿದೆ ಮತ್ತು ಅದರ ಪರಂಪರೆಯಲ್ಲಿ ಹೆಮ್ಮೆಪಡುತ್ತಿದೆ” ಎಂದು ಅಭಿಪ್ರಾಯ ಪಟ್ಟರು.

ಪ್ರಸ್ತುತ ಪಾವಗಡದಲ್ಲಿ ಉದ್ಘಾಟನೆಗೊಂಡ ದೇವಾಲಯದ ಶಿಖರವಿದ್ದ ಜಾಗದಲ್ಲಿ ಮುಂಚೆ ದರ್ಗಾವಿತ್ತು. ಅದನ್ನು ಸೌಹಾರ್ದತವಾಗಿ ಸ್ಥಳಾಂತರಿಸಿ ಅದರ ಮೇಲೆ ಧ್ವಜಸ್ತಂಭವನ್ನು ಮರುಸ್ಥಾಪಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು