ಲಂಡನ್: ಚಿಂತೆ ಮಾಡಬೇಡಿ ಬ್ರಿಟಿಷರು ಭಾರತದಿಂದ ಹೊತ್ತುಕೊಂಡುಹೋಗಿರುವ ಅಮೂಲ್ಯ ಕೊಹಿನೂರ್ ವಜ್ರವನ್ನು ಭಾರತಕ್ಕೆ ತಂದೇ ತರುವೆ ಎಂದು ಪ್ರಸ್ತುತ ಲಂಡನ್ನಲ್ಲಿರುವ ಸ್ವಯಂಘೋಷಿತ ದೇವಮಾನವ, ಆಂಜನೇಯ ಸ್ವಾಮಿಯ ಪರಮ ಭಕ್ತ, ಮೂಲತಃ ಮಧ್ಯಪ್ರದೇಶದ ಛತ್ತಾರ್ಪುರ ಜಿಲ್ಲೆಯ 26 ವರ್ಷದ ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿ ಅಲಿಯಾಸ್ ಬಾಗೇಶ್ವರ ಬಾಬಾ ಘೋಷಿಸಿದ್ದಾರೆ.
लंदन की कथा में गुरु जी ने कहा कोहिनूर लेकर आएंगे | बागेश्वर धाम सरकार#bageshwardhamsarkar #bageshwardham #london #shriramkatha #leicester pic.twitter.com/RBROAwkx7n
— Bageshwar Dham Sarkar (Official) (@bageshwardham) July 25, 2023
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕೊಳ್ಳುರು ಗ್ರಾಮದ ಹೊರ ಭಾಗದಲ್ಲಿ ಕೃಷ್ಣಾ ನದಿ ಹರಿದು ಹೋಗುತ್ತದೆ. ಈ ಭಾಗದಲ್ಲಿ ಈ ಶತ ಶತಮಾನಗಳ ಹಿಂದೆ ಕೊಹಿನೂರು ವಜ್ರ ಸಿಕ್ಕಿದ್ದ ಸ್ಥಳವಾಗಿದೆ ಎನ್ನಲಾಗಿದೆ. ಕೃಷ್ಣಾ ನದಿ ತೀರದಲ್ಲಿ ಸುರಪುರ ಇತಿಹಾಸ ಸಂಶೋಧನಾ ಕೇಂದ್ರದಿಂದ ಈಗಾಗಲೇ ನಾಮ ಫಲಕ ಹಾಕಲಾಗಿದೆ. ಜಗತ್ ಪ್ರಸಿದ್ಧ ಕೊಹಿನೂರು ವಜ್ರ ಸಿಕ್ಕ ಸ್ಥಳವೆಂದು ನಾಮ ಫಲಕ ಅಳವಡಿಸಲಾಗಿದೆ. ಇನ್ನು , ಸರಕಾರಿ ದಾಖಲೆಯಲ್ಲಿ ಕೂಡ ವಿಶ್ವ ಪ್ರಸಿದ್ಧಿ ಕೊಹಿನೂರು ವಜ್ರ ಸಿಕ್ಕಿರುವ ಸ್ಥಳ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಕಾಯ್ದಿರಿಸಿದೆ ಎಂದು ಪಹಣಿಯಲ್ಲಿ ನಮೂದಾಗಿದೆ.
ಬ್ರಿಟನ್ ರಾಣಿಯ ಕೀರಿಟದಲ್ಲಿ ಸಿಂಗಾರಗೊಂಡಿರುವ ಕೊಹಿನೂರು ವಜ್ರ ಸಿಕ್ಕಿದ್ದು ಕರ್ನಾಟಕದ ಗಿರಿ ನಾಡು ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕೊಳ್ಳುರು ಗ್ರಾಮದಲ್ಲಿ.. 1656 ರಲ್ಲಿ ಈಗಿನ ಕೊಳ್ಳುರು ಗ್ರಾಮದ ಹೊರವಲಯದಲ್ಲಿರುವ ಕೃಷ್ಣಾ ನದಿ ತೀರದಲ್ಲಿ ವಜ್ರದ ಗಣಿ ಇತ್ತಂತೆ. ಕೃಷ್ಣಾನದಿ ತೀರದಲ್ಲಿ ಈ ವಜ್ರ ಸಿಕ್ಕಿತ್ತು ಎನ್ನಲಾಗಿದ್ದು, ಹೈದರಾಬಾದ್ ಗೋಲಕುಂಡಾದ ಮಂತ್ರಿ ಮೀರ್ ಜುಮಲಾ ಗೋಲಕುಂಡಾದ ಸುಲ್ತಾನರಿಗೆ ಒಪ್ಪಿಸುತ್ತಾನಂತೆ. ಸುಲ್ತಾನನು ದೆಹಲಿಯ ದೊರೆ ಶಹಾಜಾನನಿಗೆ ಕಾಣಿಕೆಯಾಗಿ ಸಲ್ಲಿಸುತ್ತಾರೆ.
ಪಂಜಾಬ್ ರಾಜ ರಣಜೀತ್ ಸಿಂಗ್ ಅವರು ಪರ್ಶಿಯನ್ ದೊರೆಗಳ ರಕ್ಷಣೆ ಮಾಡುತ್ತಾನೆ. ಪಂಜಾಬ್ ದೊರೆ ಸಹಾಯ ಮಾಡಿದ ಹಿನ್ನಲೆ , ಪರ್ಶಿಯನ್ ದೊರೆಗಳು, ಪಂಜಾಬ್ ರಾಜ್ಯ ರಣಜೀತ್ ಸಿಂಗ್ ಗೆ ಕೊಹಿನೂರು ವಜ್ರ ನೀಡುತ್ತಾರೆ. ಕೊಹಿನೂರು ವಜ್ರವು ರಣಜೀತ್ ಸಿಂಗ್ ರಕ್ಷಣೆ ಮಾಡಿ ಖಜಾನೆಯಲ್ಲಿ ಸಂಗ್ರಹ ಮಾಡಿ ಇಟ್ಟಿದ್ದರು. ಬಳಿಕ 1799 ರಲ್ಲಿ ಬ್ರಿಟಿಷ್ ಕ್ಯಾಪ್ಟನ್ ಲಾರೆನ್ಸ್ ಪಂಜಾಬ್ ಗೆದ್ದ ನಂತರ ಖಜಾನೆಯಲ್ಲಿದ್ದ ವಜ್ರವು ಬ್ರಿಟಿಷ್ ರು ದೋಚಿ ಕೊಂಡು ಹೋಗುತ್ತಾರಂತೆ. ರಾಣಿ ವಿಕ್ಟೋರಿಯಾ ಬ್ರೂಚ್ ರವರು ಕಿರೀಟ ಧರಿಸುತ್ತಾರೆ. ಮಹಿಳೆಯರು ಮಾತ್ರ ಧರಿಸಬೇಕೆಂದು ಆದೇಶ ಮಾಡಿದ್ದ ಹಿನ್ನಲೆ, ನಂತರ ಬಂದ ರಾಣಿ ಎಲಿಜಬೆತ್ ವಜ್ರ ಕಿರೀಟ ಧರಿಸುತ್ತಾರೆ.