ಉತ್ತರಾಖಂಡ : ಉತ್ತರಕಾಶಿ ಬಳಿ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನ ಎನ್ ಡಿ ಆರ್ ಎಫ್ ರಕ್ಷಣಾ ಸಿಬ್ಬಂದಿಗಳು ಸೇರಿದಂತೆ ಹಲವು ಇಲಾಖೆಗಳು ಸತತ ಪ್ರಯತ್ನ ಮಾಡುತ್ತಿದ್ದು ಇದೀಗ ಕೇವಲ ಕ್ಷಣದಲ್ಲಿ ಕಾರ್ಮಿಕರು ಹೊರಬರುವ ಸಾಧ್ಯತೆ ಇದೆ.
ಇನ್ನು ಈ ವಿಷಯದ ಕುರಿತಾಗಿ ಎನ್ಡಿಎಮ್ಎ ನಿವೃತ್ತ ಲೆಫ್ಟಿನೆಂಟ್ ಜನರಲ್ ಸೈಯದ್ ಹಸ್ನೆನ್ ಅವರು ಮಾಹಿತಿ ನೀಡಿದ್ದು, ಕಳೆದ 17 ದಿನಗಳಿಂದ ಕಾರ್ಮಿಕರು ಸುರಂಗದಲ್ಲಿ ಸಿಲುಕಿದ್ದಾರೆ. ಕಾರ್ಮಿಕರ ರಕ್ಷಣೆ ಮಾಡೋದೇ ನಮ್ಮ ಆದ್ಯತೆಯಾಗಿದೆ. ಕಾರ್ಮಿಕರನ್ನು ಹೊರ ಕರೆ ತರಬೇಕಾದರೆ, ಒಬ್ಬರನ್ನ ಹೊರ ಕರೆ ತರಲು ಮೂರರಿಂದ ಐದು ನಿಮಿಷಗಳು ಬೇಕಾಗುತ್ತದೆ. ಆದ್ದರಿಂದ ಎಲ್ಲ 41 ಕಾರ್ಮಿಕರನ್ನು ಕರೆಸೋಕೆ 3 ರಿಂದ 4 ಗಂಟೆ ಸಮಯ ಬೇಕಾಗುತ್ತದೆ.
ಕಾರ್ಮಿಕರನ್ನು ತಲುಪಲು ಕೇವಲ ಎರಡು ಮೀಟರ್ ಬಾಕಿ ಇದೆ ಅಷ್ಟೇ. ಸುರಂಗವನ್ನು ನಾವು ಈಗಾಗಲೇ 58 ಮೀಟರ್ ತಲುಪಿದ್ದೇವೆ.ಕಾರ್ಮಿಕರನ್ನ ನಾವು ಪ್ರವೇಶಿಸಲು ಎರಡು ಮೀಟರ್ ಬಾಕಿ ಅಷ್ಟೇ ಇದೆ ಎಂದು ಹೇಳಿಕೆ ನೀಡಿದ್ದಾರೆ.