ಉತ್ತರಾಖಂಡ: ನಿರ್ಮಾಣ ಹಂತದಲ್ಲಿದ್ದ ಸುರಂಗ ಮಾರ್ಗ ಕುಸಿದು ಇಂದಿಗೆ 5 ದಿನಗಳಾಗಿವೆ. ಅವಶೇಷದಡಿ 40 ಜನರು ಸಿಲುಕಿದ್ದು, ಅವರನ್ನು ಹೊರತೆಗೆಯಲು ಕಾರ್ಯಚರಣೆ ನಡೆಯುತ್ತಿದೆ. 96 ಗಂಟೆಗಳಷ್ಟು ಕಾಲ ಉಸಿರು ಬಿಗಿಹಿಡಿದುಕೊಂಡು ಕಾರ್ಮಿಕರು ಅವಶೇಷದಡಿಯಿಂದ ಹೊರಬರಲು ಪ್ರಯತ್ನಿಸುತ್ತಿದ್ದಾರೆ. ಬುಧವಾರ ಭೂಕುಸಿತ ಉಂಟಾದ ಹಿನ್ನೆಲೆ ರಕ್ಷಣಾ ಕಾರ್ಯ ವಿಳಂಬವಾಗಿದೆ.
ನ.12ರಂದು ಸಂಭವಿಸಿದ ಘಟನೆ ಇದಾಗಿದೆ. ಸಿಲ್ಕ್ಯಾರಾ ನಿರ್ಮಾಣ ಹಂತದಲ್ಲಿದ್ದ ಸುರಂಗ ಮಾರ್ಗ ಕುಸಿದಿದೆ. ಇದರ ಒಳಗೆ ಸುಮಾರು 40ನ ಜನರು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಅವರೆಲ್ಲರು ಹೊರಬರಲಾಗದೆ ಅಲ್ಲಿಯೇ ಸಿಲುಕಿಕೊಂಡಿದ್ದಾರೆ.
ಸದ್ಯ ಕಾರ್ಮಿಕರಿಗೆ ಆಹಾರ ಮತ್ತು ಔಷಧ ವ್ಯವಸ್ಥೆ ಮಾಡಲಾಗಿದೆ. 2018ರಲ್ಲಿ ಥಾಯ್ಲೆಂಡ್ ಗುಹೆಯಲ್ಲಿ ಸಿಕ್ಕಿ ಬಿದ್ದ ಮಕ್ಕಳನ್ನು ರಕ್ಷಿಸಿದ ಥಾಯ್ಲೆಂಡ್ ಮತ್ತು ನಾರ್ವೆಯ ಎಲೈಟ್ ರಕ್ಷಣಾ ತಂಡಗಳು ಈ ಕಾರ್ಯಚರಣೆಯಲ್ಲಿ ಸೇರಿಕೊಂಡಿದ್ದು ಸಹಾಯ ಮಾಡುತ್ತಿದೆ. ಅಧಿಕಾರಿಗಳು ಕಾರ್ಮಿಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.