News Karnataka Kannada
Wednesday, May 08 2024
ಉತ್ತರಖಂಡ

ಉತ್ತರಕಾಶಿ ಸುರಂಗದಲ್ಲಿ ಸಿಲುಕಿದವರಿಗಾಗಿ ಮುಂದುವರಿದ ರಕ್ಷಣಾಕಾರ್ಯ

Tunnls
Photo Credit : News Kannada

ಉತ್ತರಾಖಂಡ: ನಿರ್ಮಾಣ ಹಂತದಲ್ಲಿದ್ದ ಸುರಂಗ ಮಾರ್ಗ ಕುಸಿದು ಇಂದಿಗೆ 5 ದಿನಗಳಾಗಿವೆ. ಅವಶೇಷದಡಿ 40 ಜನರು ಸಿಲುಕಿದ್ದು, ಅವರನ್ನು ಹೊರತೆಗೆಯಲು ಕಾರ್ಯಚರಣೆ ನಡೆಯುತ್ತಿದೆ. 96 ಗಂಟೆಗಳಷ್ಟು ಕಾಲ ಉಸಿರು ಬಿಗಿಹಿಡಿದುಕೊಂಡು ಕಾರ್ಮಿಕರು ಅವಶೇಷದಡಿಯಿಂದ ಹೊರಬರಲು ಪ್ರಯತ್ನಿಸುತ್ತಿದ್ದಾರೆ.  ಬುಧವಾರ ಭೂಕುಸಿತ ಉಂಟಾದ ಹಿನ್ನೆಲೆ ರಕ್ಷಣಾ ಕಾರ್ಯ ವಿಳಂಬವಾಗಿದೆ.

ನ.12ರಂದು ಸಂಭವಿಸಿದ ಘಟನೆ ಇದಾಗಿದೆ. ಸಿಲ್ಕ್ಯಾರಾ ನಿರ್ಮಾಣ ಹಂತದಲ್ಲಿದ್ದ ಸುರಂಗ ಮಾರ್ಗ ಕುಸಿದಿದೆ. ಇದರ ಒಳಗೆ ಸುಮಾರು 40ನ ಜನರು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಅವರೆಲ್ಲರು ಹೊರಬರಲಾಗದೆ ಅಲ್ಲಿಯೇ ಸಿಲುಕಿಕೊಂಡಿದ್ದಾರೆ.

ಸದ್ಯ ಕಾರ್ಮಿಕರಿಗೆ ಆಹಾರ ಮತ್ತು ಔಷಧ ವ್ಯವಸ್ಥೆ ಮಾಡಲಾಗಿದೆ. 2018ರಲ್ಲಿ ಥಾಯ್ಲೆಂಡ್​​ ಗುಹೆಯಲ್ಲಿ ಸಿಕ್ಕಿ ಬಿದ್ದ ಮಕ್ಕಳನ್ನು ರಕ್ಷಿಸಿದ ಥಾಯ್ಲೆಂಡ್​ ಮತ್ತು ನಾರ್ವೆಯ ಎಲೈಟ್​ ರಕ್ಷಣಾ ತಂಡಗಳು ಈ ಕಾರ್ಯಚರಣೆಯಲ್ಲಿ ಸೇರಿಕೊಂಡಿದ್ದು ಸಹಾಯ ಮಾಡುತ್ತಿದೆ. ಅಧಿಕಾರಿಗಳು ಕಾರ್ಮಿಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು