ಉತ್ತರಪ್ರದೇಶ ಲಖೀಂಪುರ ಖೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ ಮೃತಪಟ್ಟ ರೈತರಿಗೆ ಶ್ರದ್ಧಾಂಜಲಿ ಸಲ್ಲಿಸುವ ಹಿನ್ನೆಲೆ ಇಂದು ಶಹೀದ್ ಕಿಸಾನ್ ದಿವಸ್ ಆಚರಿಸುವುದಾಗಿ ಕಿಸಾನ್ ಮೋರ್ಚಾ ತಿಳಿಸಿದೆ.
ಇಂದು ದೇಶಾದ್ಯಂತ ಇರುವ ವಿವಿಧ ರೈತ ಸಂಘಟನೆಗಳು ಪ್ರಾರ್ಥನೆ, ಗೌರವ ಅರ್ಪಣೆ ಸಭೆಗಳನ್ನು ನಡೆಸಬೇಕು. ಸಂಜೆ ಮೇಣದ ಬತ್ತಿ ಹಿಡಿದು ಮೆರವಣಿಗೆ ನಡೆಸಬೇಕು ಮತ್ತು ರಾತ್ರಿ 8 ಗಂಟೆಗೆ ತಮ್ಮ ಮನೆಯ ಹೊರಗೆ 5 ಮೇಣದ ಬತ್ತಿಗಳನ್ನು ಹಚ್ಚಬೇಕು ಎಂದು ಕಿಸಾನ್ ಮೋರ್ಚಾ ರೈತರಿಗೆ ಕರೆ ನೀಡಿದೆ.
ಈ ದಿನ ಲಖೀಂಪುರ್ ಖೇರಿಯ ಸಾಹೀಬ್ಜಾದಾ ಇಂಟರ್ ಕಾಲೇಜಿನ ಎದುರು ಮೃತ ರೈತರಿಗೆ ಅಂತಿಮ ಪ್ರಾರ್ಥನೆ ನಡೆಯಲಿದ್ದು, ಎಲ್ಲ ಸಿದ್ಧತೆ ನಡೆದಿದೆ. ಪ್ರಾರ್ಥನಾ ಕಾರ್ಯಕ್ರಮದಲ್ಲಿ ಸುಮಾರು 10 ಸಾವಿರ ರೈತರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಕಿಸಾನ್ ಮೋರ್ಚಾ ತಿಳಿಸಿದೆ.