ಮುಜಾಫರ್ನಗರ್, ಆ.24- ಅತ್ಯಾಚಾರದ ಆರೋಪಿಗಳಾಗಿದ್ದು ಅದರಿಂದ ಪಾರಾಗಲು ಗುಂಡಿಟ್ಟು ಒಬ್ಬನನ್ನು ಹತ್ಯೆ ಮಾಡಿ ತಲೆ ಮರೆಸಿಕೊಂಡಿರುವ ಆರೋಪಿಗಳಿಬ್ಬರ ಸುಳಿವು ನೀಡಿದವರಿಗೆ 25 ಸಾವಿರ ರೂಪಾಯಿ ಬಹುಮಾನ ಘೋಷಣೆ ಮಾಡಲಾಗಿದೆ. ಆಧುನಿಕ ತಂತ್ರಜ್ಞಾನ ಬೆಳೆದಂತೆಲ್ಲಾ ಪೊಲೀಸರ ಕಾರ್ಯಕ್ಷಮತೆ ಹೆಚ್ಚಿದ್ದು, ಆರೋಪಿಗಳು ಅಷ್ಟು ಸುಲಭವಾಗಿ ತಲೆ ತಪ್ಪಿಸಿಕೊಳ್ಳಲು ಅವಕಾಶವಿಲ್ಲ.
ಆದರೆ ಉತ್ತರ ಪ್ರದೇಶದ ಆರೋಪಿಗಳಿಬ್ಬರು ಒಂದು ವರ್ಷದಿಂದ ಪೊಲೀಸರಿಗೆ ಚೆಳ್ಳೆ ಹಣ್ಣು ತಿನಿಸುತ್ತಿದ್ದಾರೆ. ಹೀಗಾಗಿ ಆರೋಪಿಗಳ ಬಗ್ಗೆ ಸುಳಿವು ನೀಡಿದವರಿಗೆ ನಗದು ಬಹುಮಾನ ಘೋಷಣೆ ಮಾಡಲಾಗಿದೆ. ಶಮ್ಲಿ ಜಿಲ್ಲೆಯ ಕೈರಾಣ ಪೊಲೀಸ್ ಠಾಣೆ ವ್ಯಾಪ್ತಿಯ ಭುರಾ ಗ್ರಾಮದಲ್ಲಿ ಶುಭಂ ಮತ್ತು ಸನ್ನಿ ಎಂಬಿಬ್ಬರು ಆರೋಪಿಗಳು ಅಜಯ್ ಎಂಬ ವ್ಯಕ್ತಿಯನ್ನು ಕಳೆದ ವರ್ಷದ ಆಗಸ್ಟ್ 16ರಂದು ಗುಂಡಿಟ್ಟು ಹತ್ಯೆ ಮಾಡಿದ್ದರು.ಆರೋಪಿಗಳಿಬ್ಬರು ಅತ್ಯಾಚಾರದ ಆರೋಪಿಗಳಾಗಿದ್ದರು. ಅಜಯ್ ಅತ್ಯಾಚಾರ ಸಂತ್ರಸ್ಥೆಗೆ ಸಹಾಯ ಮಾಡಿದ್ದ ಕಾರಣಕ್ಕೆ ಹತ್ಯೆ ಮಾಡಿದ್ದರು ಎಂದು ಎಸ್ಪಿ ಸುಕ್ರೀತ್ ಮಾಧವ್ ಮಿಶ್ರಾ ತಿಳಿಸಿದ್ದಾರೆ. ತಲೆ ಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ನಿರಂತರ ಕಾರ್ಯಾಚರಣೆ ನಡೆಸಲಾಗಿದ್ದು, ಮಾಹಿತಿ ನೀಡಿದವರಿಗೆ ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಅತ್ಯಾಚಾರಿಯ ಸುಳಿವು ನೀಡಿದವರಿಗೆ 25 ಸಾವಿರ ರೂ. ಬಹುಮಾನ ಘೋಷಿಸಿದ ಪೋಲೀಸ್ ಇಲಾಖೆ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.