News Karnataka Kannada
Monday, April 29 2024
ಉತ್ತರ ಪ್ರದೇಶ

ಟ್ರಕ್‌ ಬಸ್‌ ನಡುವೆ ಢಿಕ್ಕಿ ; 18 ಮಂದಿ ಸಾವು ; 20 ಜನರಿಗೆ ಗಾಯ

Bus Accident
Photo Credit :

ನವದೆಹಲಿ: ಉತ್ತರ ಪ್ರದೇಶದ ಬರಾಬಂಕಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ 18 ಜನರು ಮೃತಪಟ್ಟಿದ್ದಾರೆ. ಈ ಅಪಘಾತದಲ್ಲಿ ಸುಮಾರು 25 ಜನರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಗಂಭೀರವಾಗಿ ಗಾಯಗೊಂಡ 8 ಜನರನ್ನು ಚಿಕಿತ್ಸೆಗಾಗಿ ಲಕ್ನೋಗೆ ಕಳುಹಿಸಲಾಗಿದೆ. ಮಂಗಳವಾರ ರಾತ್ರಿ, ಅಯೋಧ್ಯೆ-ಲಕ್ನೋ ಹೆದ್ದಾರಿಯಲ್ಲಿ ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಈ ಡಬಲ್ ಡೆಕ್ಕರ್ ಬಸ್ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ, ಅನೇಕ ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಹರಿಯಾಣದ ಪಾಲ್ವಾಲ್‌ನಿಂದ ಬಿಹಾರಕ್ಕೆ ಬಸ್ ಹೋಗುತ್ತಿದ್ದು, ಇದರಲ್ಲಿ ಹೆಚ್ಚಿನವರು ಕಾರ್ಮಿಕರು ಎಂದು ಪೊಲೀಸರು ತಿಳಿಸಿದ್ದಾರೆ. ಡಬಲ್ ಡೆಕ್ಕರ್ ಆಗಿದ್ದರಿಂದ ಬಸ್‌ನಲ್ಲಿ ಸುಮಾರು 100 ಪ್ರಯಾಣಿಕರು ಇದ್ದರು. ಬರಾಬಂಕಿಯ ಕಲ್ಯಾಣಿ ನದಿಯ ಬಳಿಯ ರಾಮ್ ಸನೆಹಿ ಘಾಟ್‌ನಲ್ಲಿ ಬಸ್‌ನ ಆಕ್ಸಲ್ ತುಂಡಾಗಿದ್ದು ಬಸ್ ರಿಪೇರಿ ಮಾಡಲು ನಿಲುಗಡೆ ಮಾಡಲಾಗಿತ್ತು. ಮಾಹಿತಿಯ ಪ್ರಕಾರ, ಚಾಲಕ ಬಸ್ ರಿಪೇರಿ ಪ್ರಾರಂಭಿಸಿದಾಗ, ಕೆಲವು ಪ್ರಯಾಣಿಕರು ಹೊರಬಂದು ಕೆಲವರು ರಸ್ತೆಯ ಮೇಲೆ ಮಲಗಿದರು. ಬಸ್ ಒಳಗೆ ಮಲಗಿದ್ದ ಕೆಲವು ಪ್ರಯಾಣಿಕರೂ ಇದ್ದರು. ಅಷ್ಟರಲ್ಲಿ, ಹಿಂದಿನಿಂದ ಬಂದಿದ್ದ ಟ್ರಕ್ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಬಸ್‌ಗೆ ಡಿಕ್ಕಿ ಹೊಡೆದಿದ್ದು, ಭಿಕರ ಅಪಘಾತ ಸಂಬವಿಸಿದೆ.
ಅಪಘಾತ ಎಷ್ಟು ಭೀಕರವಾಗಿದೆಯೆಂದರೆ ಅನೇಕ ಜನರು ಸ್ಥಳದಲ್ಲೇ ಸಾವನ್ನಪ್ಪಿದರು. ಮೃತ ದೇಹಗಳ ಅವಶೇಷಗಳು ರಸ್ತೆಯಲ್ಲೆಲ್ಲ ಹರಡಿಕೊಂಡಿದ್ದವು.ಅಪಘಾತದ ನಂತರ, ಎಲ್ಲರೂ ತಮ್ಮ ಆಪ್ತರನ್ನು ಮೃತ ದೇಹಗಳಲ್ಲಿ ಹುಡುಕುತ್ತಿದ್ದರು. ಇದರಿಂದಾಗಿ ಹೆದ್ದಾರಿಯಲ್ಲಿ ಸುಮಾರು 5 ಕಿ.ಮೀ ವರೆಗೆ ಟ್ರಾಫಿಕ್‌ ಜಾಮ್ ಉಂಟಾಗಿತ್ತು. ಪೊಲೀಸರು ಮತ್ತು ಸಮೀಪದ ಗ್ರಾಮಸ್ಥರು ಸ್ಥಳಕ್ಕೆ ತಲುಪಿ ಪರಿಹಾರ ಕಾರ್ಯಗಳನ್ನು ಪ್ರಾರಂಭಿಸಿದರು. ಕ್ರೇನ್‌ನ ಸಹಾಯದಿಂದ ಪೊಲೀಸರು ಎರಡೂ ವಾಹನಗಳನ್ನು ತೆಗೆದ ನಂತರ ಸಂಚಾರ ಆರಂಭಗೊಂಡಿತು. ಗಾಯಗೊಂಡಿರುವ 20 ಕ್ಕೂ ಹೆಚ್ಚು ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು