ಭೋಪಾಲ್ : ಕೇಂದ್ರವು ಜಾರಿಗೆ ತಂದಿರುವ ‘ತ್ರಿವಳಿ ತಲಾಖ್’ ಕಾನೂನನ್ನು ವಿರೋಧಿಸುವವರು ದೇಶದ “ಮುಸ್ಲಿಂ ಮಹಿಳೆಯರ ವಿರುದ್ಧವಾಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಪುನರುಚ್ಚರಿಸಿದ್ದಾರೆ.
ಭೋಪಾಲ್ನಲ್ಲಿ ಕಾರ್ಯಕರ್ತರ ಸಂವಾದ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿದರು. ಕೆಲವು ಮುಸ್ಲಿಂ ದೇಶಗಳು ವರ್ಷಗಳ ಹಿಂದೆಯೇ ತ್ರಿವಳಿ ತಲಾಖ್ ನಿಷೇಧಿಸಲು ಕಾನೂನು ಜಾರಿಗೆ ತಂದಿವೆ. ನಾನು ಎಲ್ಲಿಗೆ ಹೋದರೂ ಮುಸ್ಲಿಮ್ ಜನರು ತ್ರಿವಳಿ ತಲಾಖ್ ನಿಷೇಧಿಸಿದ್ದಕ್ಕಾಗಿ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾರೆ. ನೀವು (ಬೂತ್ ಕಾರ್ಯಕರ್ತರು) ರ ಮುಸ್ಲಿಂಮರ ಪ್ರದೇಶಗಳಿಗೆ ಹೋಗಿ ಈ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಇದೇ ವೇಳೆ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಕುರಿತು ಮಾತನಾಡಿದ ಮೋದಿ, “ಇಂದು ಜನರನ್ನು ಯುಸಿಸಿ ಹೆಸರಿನಲ್ಲಿ ಪ್ರಚೋದಿಸಲಾಗುತ್ತಿದೆ. ದೇಶವು ಎರಡು ಕಾನೂನುಗಳ ಮೇಲೆ ಹೇಗೆ ನಡೆಯಲು ಸಾಧ್ಯ. ಸಂವಿಧಾನವು ಸಮಾನ ಹಕ್ಕುಗಳ ಬಗ್ಗೆ ಹೇಳುತ್ತದೆ. ಇದೇ ವೇಳೆ ಯುಸಿಸಿ ಜಾರಿಗೆ ತರುವಂತೆ ಸುಪ್ರೀಂ ಮೊರೆಹೋಗಿದ್ದಾರೆ. ಹೀಗಾಗಿ ಇದು ವೋಟ್ ಬ್ಯಾಂಕ್ ರಾಜಕೀಯವಲ್ಲದೆ ಮತ್ತೇನು ಎಂದರು.