News Karnataka Kannada
Thursday, May 02 2024
ತೆಲಂಗಾಣ

ಅಬ್ಬಬ್ಬಾ ಮೇಕೆ ಕದ್ದವರಿಗೆ ಎಂತಹ ಶಿಕ್ಷೆ ನೋಡಿ..

Look at the punishment for those who stole goats.
Photo Credit : IANS

ಹೈದರಾಬಾದ್: ತೆಲಂಗಾಣದ ಮಂಚೇರಿಯಲ್ ಜಿಲ್ಲೆಯಲ್ಲಿ ಕಳ್ಳತನದ ಶಂಕೆಯ ಮೇಲೆ ದಲಿತ ಯುವಕ ಸೇರಿದಂತೆ ಇಬ್ಬರನ್ನು ತಲೆಕೆಳಗಾಗಿ ನೇತುಹಾಕಿ ಚಿತ್ರಹಿಂಸೆ ನೀಡಿದ ಘಟನೆ ಬೆಳಕಿಗೆ ಬಂದಿದೆ.

ಕಳ್ಳತನದ ಆರೋಪದ ಮೇಲೆ ಯುವಕರನ್ನು ತಲೆಕೆಳಗಾಗಿ ಕಟ್ಟಿದ್ದ ಕುರಿ ಶೆಡ್‌ ಮಾಲೀಕ ಅದರ ಕೆಳಗೆ ಬೆಂಕಿ, ಹೊಗೆ ಹಾಕಿದ್ದಾರೆ. ನಂತರ ಮನಬಂದಂತೆ ಇಬ್ಬರನ್ನು ಥಳಿಸಿದ್ದಾರೆ.

ಹೈದರಾಬಾದ್‌ನಿಂದ ಸುಮಾರು 300 ಕಿಮೀ ದೂರದಲ್ಲಿರುವ ಮಂಚೇರಿಯಲ್ ಜಿಲ್ಲೆಯ ಮಂದಮರ್ರಿಯಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ಚಿತ್ರಹಿಂಸೆಯ ವೀಡಿಯೋಗಳು ಭಾನುವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿವೆ. ಕುರಿ ಸಾಕಾಣಿಕೆ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ತೇಜ (19) ಮತ್ತು ಆತನ ದಲಿತ ಸ್ನೇಹಿತ ಕಿರಣ್ (30)ನನ್ನು ಕುರಿ ಸಾಕಾಣಿಕೆ ಕೇಂದ್ರ ಮಾಲೀಕರ ಕುಟುಂಬ ಸದಸ್ಯರು ಶೆಡ್‌ನಲ್ಲಿ  ಚಿತ್ರಹಿಂಸೆ ನೀಡಿದ್ದಾರೆ.

ಸುಮಾರು 20 ದಿನಗಳ ಹಿಂದೆ ಶೆಡ್ ನಲ್ಲಿದ್ದ ಮೇಕೆ ಹಾಗೂ ಕೆಲವು ಕಬ್ಬಿಣದ ಸರಳು ಕಳವಾಗಿತ್ತು. ಇದೇ ಸಂಶಯದ ಮೇಲೆ ಕುರಿರ ಸಾಕಾಣಿಕೆ ಕೇಂದ್ರದ ಮಾಲೀಕ ಕೊಮುರಾಜುಲ ರಾಮುಲು ಮತ್ತು ಆತನ ಕುಟುಂಬಸ್ಥರು ಯುವಕರನ್ನು ಥಳಿಸಿದ್ದಾರೆ. ಪೊಲೀಸರು ರಾಜು ಮತ್ತು ಆತನ ಕುಟುಂಬದವರ ವಿರುದ್ಧ ಎಸ್‌ಸಿ, ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು