News Karnataka Kannada
Thursday, May 02 2024
ತೆಲುಗು

“ಜೂ.ಎನ್​ಟಿಆರ್ ಫ್ಲೆಕ್ಸ್” ಕಿತ್ತು ಹಾಕುವಂತೆ ನಂದಮೂರಿ ಬಾಲಕೃಷ್ಣ ವಾರ್ನ್

Nandanoori
Photo Credit : Twitter

ಚೆನ್ನೈ: ಇಂದು (ಜ.18) ಎನ್​ಟಿಆರ್ ಅವರ 18ನೇ ಪುಣ್ಯಸ್ಮರಣೆ. ಎನ್​ಟಿಆರ್ ಘಾಟ್​ ಬಳಿ ನಂದಮೂರಿ ಕುಟುಂಬದ ಗಣ್ಯರ ಭಾವಚಿತ್ರಗಳುಳ್ಳ ಫ್ಲೆಕ್ಸ್ ಬ್ಯಾನರ್​ಗಳನ್ನು ಅಭಿಮಾನಿಗಳು ಅಳವಡಿಸಿದ್ದರು. ಎನ್​ಟಿಆರ್ ಹಾಗೂ ಕಲ್ಯಾಣ್ ರಾಮ್ ಅವರುಗಳು ಬೆಳ್ಳಂಬೆಳಿಗ್ಗೆ ಆಗಮಿಸಿ ಎನ್​ಟಿಆರ್ ಸಮಾಧಿಗೆ ನಮಿಸಿ ತೆರಳಿದರು.

ಅದಾದ ಬಳಿಕ ತುಸು ತಡವಾಗಿ ಬಂದ ನಂದಮೂರಿ ಬಾಲಕೃಷ್ಣ ಅಲ್ಲಿ ಹಾಕಲಾಗಿದ್ದ ಎನ್​ಟಿಆರ್ ಹಾಗೂ ಕಲ್ಯಾಣ್​ರಾಮ್​ರ ಫ್ಲೆಕ್ಸ್​ಗಳನ್ನು ನೋಡುತ್ತಲೇ ಗರಂ ಆದರು.

ತನ್ನ ಸಹಾಯಕನ ಬಳಿ ‘ಇವನ್ನೆಲ್ಲ ತೆಗಿಸು’ ಎಂದರು. ಬಳಿಕ ‘ಈಗಲೇ ಕಿತ್ತು ಹಾಕಿಸು’ ಎಂದು ಕೋಪದಿಂದಲೇ ಹೇಳಿ ಒಳನಡೆದರು. ತಂದೆ ಎನ್​ಟಿಆರ್ ಸಮಾಧಿಗೆ ನಮಿಸಿ ಬಾಲಕೃಷ್ಣ ಹೊರಡುತ್ತಿದ್ದಂತೆ, ಎನ್​ಟಿಆರ್ ಹಾಗೂ ಕಲ್ಯಾಣ್​ರಾಮ್​ರ ಚಿತ್ರಗಳನ್ನು ಹೊಂದಿದ್ದ ಎಲ್ಲ ಫ್ಲೆಕ್ಸ್​ಗಳನ್ನು ಕಿತ್ತು ಹಾಕಲಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ನಂದಮೂರಿ ಕುಟುಂಬದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಗುಟ್ಟಾಗಿ ಉಳಿದಿಲ್ಲ. ನಂದಮೂರಿ ಕುಟುಂಬದ ಜೂ ಎನ್​ಟಿಆರ್ ಹಾಗೂ ಅವರ ಸಹೋದರ ಕಲ್ಯಾಣ್ ರಾಮ್ ಒಂದೆಡೆ ಆದರೆ ಅವರ ಚಿಕ್ಕಪ್ಪ ನಂದಮೂರಿ ಬಾಲಕೃಷ್ಣ ಮತ್ತೋಂದೆಡೆ ಎಂಬಂತಾಗಿದ್ದಾರೆ. ಇದೀಗ ಈ ಇಬ್ಬರ ನಡುವೆ ಅದೆಷ್ಟು ದ್ವೇಷವಿದೆ ಎಂಬುದಕ್ಕೆ ಮತ್ತೊಂದು  ಉದಾಹರಣೆ ಎಂಬಂತಿದೆ ಈ ದೃಶ್ಯ.

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು