ಚೆನ್ನೈ: ಇಂದು (ಜ.18) ಎನ್ಟಿಆರ್ ಅವರ 18ನೇ ಪುಣ್ಯಸ್ಮರಣೆ. ಎನ್ಟಿಆರ್ ಘಾಟ್ ಬಳಿ ನಂದಮೂರಿ ಕುಟುಂಬದ ಗಣ್ಯರ ಭಾವಚಿತ್ರಗಳುಳ್ಳ ಫ್ಲೆಕ್ಸ್ ಬ್ಯಾನರ್ಗಳನ್ನು ಅಭಿಮಾನಿಗಳು ಅಳವಡಿಸಿದ್ದರು. ಎನ್ಟಿಆರ್ ಹಾಗೂ ಕಲ್ಯಾಣ್ ರಾಮ್ ಅವರುಗಳು ಬೆಳ್ಳಂಬೆಳಿಗ್ಗೆ ಆಗಮಿಸಿ ಎನ್ಟಿಆರ್ ಸಮಾಧಿಗೆ ನಮಿಸಿ ತೆರಳಿದರು.
ಅದಾದ ಬಳಿಕ ತುಸು ತಡವಾಗಿ ಬಂದ ನಂದಮೂರಿ ಬಾಲಕೃಷ್ಣ ಅಲ್ಲಿ ಹಾಕಲಾಗಿದ್ದ ಎನ್ಟಿಆರ್ ಹಾಗೂ ಕಲ್ಯಾಣ್ರಾಮ್ರ ಫ್ಲೆಕ್ಸ್ಗಳನ್ನು ನೋಡುತ್ತಲೇ ಗರಂ ಆದರು.
ತನ್ನ ಸಹಾಯಕನ ಬಳಿ ‘ಇವನ್ನೆಲ್ಲ ತೆಗಿಸು’ ಎಂದರು. ಬಳಿಕ ‘ಈಗಲೇ ಕಿತ್ತು ಹಾಕಿಸು’ ಎಂದು ಕೋಪದಿಂದಲೇ ಹೇಳಿ ಒಳನಡೆದರು. ತಂದೆ ಎನ್ಟಿಆರ್ ಸಮಾಧಿಗೆ ನಮಿಸಿ ಬಾಲಕೃಷ್ಣ ಹೊರಡುತ್ತಿದ್ದಂತೆ, ಎನ್ಟಿಆರ್ ಹಾಗೂ ಕಲ್ಯಾಣ್ರಾಮ್ರ ಚಿತ್ರಗಳನ್ನು ಹೊಂದಿದ್ದ ಎಲ್ಲ ಫ್ಲೆಕ್ಸ್ಗಳನ್ನು ಕಿತ್ತು ಹಾಕಲಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ನಂದಮೂರಿ ಕುಟುಂಬದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಗುಟ್ಟಾಗಿ ಉಳಿದಿಲ್ಲ. ನಂದಮೂರಿ ಕುಟುಂಬದ ಜೂ ಎನ್ಟಿಆರ್ ಹಾಗೂ ಅವರ ಸಹೋದರ ಕಲ್ಯಾಣ್ ರಾಮ್ ಒಂದೆಡೆ ಆದರೆ ಅವರ ಚಿಕ್ಕಪ್ಪ ನಂದಮೂರಿ ಬಾಲಕೃಷ್ಣ ಮತ್ತೋಂದೆಡೆ ಎಂಬಂತಾಗಿದ್ದಾರೆ. ಇದೀಗ ಈ ಇಬ್ಬರ ನಡುವೆ ಅದೆಷ್ಟು ದ್ವೇಷವಿದೆ ಎಂಬುದಕ್ಕೆ ಮತ್ತೊಂದು ಉದಾಹರಣೆ ಎಂಬಂತಿದೆ ಈ ದೃಶ್ಯ.
Didn't expect this from #Balakrishna
What you say Tigers ? #JrNTR#DevaraPart1 pic.twitter.com/pk8fcWhJP7— TarunKumar (@mr__btk) January 18, 2024