ದೆಹಲಿ: ಭಾರತ ಸರ್ಕಾರದ ‘ಆಪರೇಷನ್ ಅಜಯ್’ ಎರಡನೇ ಬ್ಯಾಚ್ ಮೂಲಕ ಇಸ್ರೇಲ್ನಲ್ಲಿರುವ ಭಾರತೀಯರು ಬೆಳಗ್ಗಿನ ಜಾವ ದೆಹಲಿಗೆ ಮರಳಿದ್ದಾರೆ. ಸುಮಾರು 235 ಭಾರತೀಯ ಪ್ರಯಾಣಿಕರನ್ನೊಳಗೊಂಡ ಎರಡನೇ ಬ್ಯಾಚ್ ಟೆಲ್ ಅವಿವ್ನಿಂದ ಭಾರತಕ್ಕೆ ಆಗಮಿಸಿದೆ.
ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 11.30ಕ್ಕೆ ವಿಶೇಷ ವಿಮಾನ ಹೊರಟಿದ್ದು, ಬೆಳಗ್ಗೆ 6 ಗಂಟೆ ಸುಮಾರಿಗೆ ಬಂದಿಳಿದಿದ್ದಾರೆ. ಇಸ್ರೇಲ್ನಿಂದ ತಾಯ್ನಾಡಿಗೆ ಬಂದ ಭಾರತೀಯ ಪ್ರಜೆಗಳನ್ನು ಕೇಂದ್ರ ಸಚಿವ ರಾಜ್ಕುಮಾರ್ ರಂಜನ್ ಸಿಂಗ್ ಬರಮಾಡಿಕೊಂಡರು. ದೆಹಲಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವಾಗತಕೋರಿದರು.
ಕಳೆದ ದಿನ ಇಸ್ರೇಲ್ನಿಂದ ಭಾರತಕ್ಕೆ ಮೊದಲ ಬ್ಯಾಚ್ ಬಂದಿತ್ತು. ಮೊದಲ ಬ್ಯಾಚ್ನಲ್ಲಿ ಒಟ್ಟು 212 ನಾಗರಿಕರನ್ನು ಕರೆದುಕೊಂಡು ಬರಲಾಗಿತ್ತು