ಅಯೋಧ್ಯೆ: ರಾಮ ವಿಗ್ರಹ ಪ್ರಾಣಪ್ರತಿಷ್ಠೆಗೆ ಆಗಮಿಸಲಿರುವ ಅತಿಥಿಗಳಿಗೆ ಶುಕ್ರವಾರ ಪಾಸ್ ಬಿಡುಗಡೆಗೊಳಿಸಲಾಗಿದೆ.
ಪ್ರವೇಶ ಪಾಸ್ ನಲ್ಲಿರಿವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ ನಂತರವೇ ಮಂದಿರದ ಒಳಗೆ ಪ್ರವೇಶಿಸಬಹುದು ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಹೇಳಿದೆ.
ಪಾಸ್ ನ ಫೋಟೋವನ್ನು ಎಕ್ಸ್ ನಲ್ಲಿ ಹಂಚಿಕೊಂಡಿರುವ ಟ್ರಸ್ಟ್, ಕೇವಲ ಆಮಂತ್ರಣ ಪತ್ರಿಕೆ ಪ್ರವೇಶ ಒದಗಿಸುವುದಿಲ್ಲ. ಬದಲಿಗೆ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ನೀಡಿರುವ ಪಾಸ್ ನಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ ಬಳಿಕವೇ ಪ್ರಾಣಪ್ರತಿಷ್ಠಾಪನಾ ಉತ್ಸವದಲ್ಲಿ ಭಾಗವಹಿಸಬಹುದು ಎಂದು ಕಾರ್ಯಕ್ರಮಕ್ಕೆ ಬರಲಿರುವ ಗಣ್ಯರಿಗೆ ತಿಳಿಸಿದೆ.
ಈವರೆಗೆ ೩ಸಾವಿರ ಅರ್ಚಕರು, ದಾನಿಗಳು, ರಾಜಕಾರಣಿಗಳು ಸೇರಿದಂತೆ ೭ಸಾವಿರಕ್ಕೂ ಹೆಚ್ಚು ಜನರಿಗೆ ಆಮಂತ್ರಣ ಪತ್ರ ಕಳಿಸಲಾಗಿದೆ.