News Karnataka Kannada
Monday, April 29 2024
ದೆಹಲಿ

ಜ. 22ರಂದು 2,000 ರೂ ನೋಟು ವಿನಿಮಯಕ್ಕೆ ಅವಕಾಶ ಇಲ್ಲ: ಆರ್​ಬಿಐ

ಜನವರಿ 22ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ ವಿಗ್ರಹ ಪ್ರಾಣ ಪ್ರತಿಷ್ಠಾಪನಾ ಕಾರ್ಯ  ನಡೆಯಲಿದ್ದು ಅಂದು ಬಹಳಷ್ಟು ಕಡೆ ಅರೆ ರಜೆ ಘೋಷಿಸಲಾಗಿದ್ದು, ಅಂತೆಯೇ ಬ್ಯಾಂಕುಗಳಿಗೂ ಅರ್ಧ ದಿನ ರಜೆ ಇರುತ್ತದೆ. ಹೀಗಾಗಿ, ಅಂದು 2,000 ರೂ ನೋಟುಗಳ ವಿನಿಮಯಕ್ಕೆ ಅವಕಾಶ ಇರುವುದಿಲ್ಲ. ಆರ್​ಬಿಐ ಈ ವಿಷಯವನ್ನು ಇಂದು ಸ್ಪಷ್ಟಪಡಿಸಿದೆ.
Photo Credit : News Kannada

ನವದೆಹಲಿ: ಜನವರಿ 22ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ ವಿಗ್ರಹ ಪ್ರಾಣ ಪ್ರತಿಷ್ಠಾಪನಾ ಕಾರ್ಯ  ನಡೆಯಲಿದ್ದು ಅಂದು ಬಹಳಷ್ಟು ಕಡೆ ಅರೆ ರಜೆ ಘೋಷಿಸಲಾಗಿದ್ದು, ಅಂತೆಯೇ ಬ್ಯಾಂಕುಗಳಿಗೂ ಅರ್ಧ ದಿನ ರಜೆ ಇರುತ್ತದೆ. ಹೀಗಾಗಿ, ಅಂದು 2,000 ರೂ ನೋಟುಗಳ ವಿನಿಮಯಕ್ಕೆ ಅವಕಾಶ ಇರುವುದಿಲ್ಲ. ಆರ್​ಬಿಐ ಈ ವಿಷಯವನ್ನು ಇಂದು ಸ್ಪಷ್ಟಪಡಿಸಿದೆ.

‘ಭಾರತ ಸರ್ಕಾರ ಅರ್ಧ ದಿನ ರಜೆ ಘೋಷಿಸಿರುವುದರಿಂದ ಆರ್​ಬಿಐನ ಯಾವುದೆ 19 ಇಷ್ಯೂ ಆಫೀಸ್​ಗಳಲ್ಲಿ 2,000 ರೂ ನೋಟು ವಿನಿಮಯ ಇರುವುದಿಲ್ಲ,’ ಎರಡು ಸಾವಿರ ರೂ ನೋಟು ವಿನಿಮಯದ ಸೌಲಭ್ಯ  ಜನವರಿ 23ರಂದು  ಮುಂದುವರಿಯುತ್ತದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ.

ಆರ್​ಬಿಐ 2023ರ ಮೇ 19ರಂದು 2,000 ರೂ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವುದಾಗಿ ಘೋಷಣೆ ಮಾಡಿತು. ಮೊದಲಿಗೆ ಎಲ್ಲಾ ಬ್ಯಾಂಕುಗಳಲ್ಲೂ ನೋಟು ವಿನಿಮಯ ಮಾಡಲು ಅಥವಾ ಠೇವಣಿ ಇಡಲು ಅವಕಾಶ ಕೊಟ್ಟಿತ್ತು. ಇದೀಗ ಆರ್​ಬಿಐನ 19 ಇಷ್ಯೂ ಆಫೀಸ್​ಗಳಲ್ಲಿ ಮಾತ್ರವೇ ನೋಟು ವಿನಿಮಯಕ್ಕೆ ಅವಕಾಶ ಇದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು