News Karnataka Kannada
Saturday, April 27 2024
ಪಶ್ಚಿಮ ಬಂಗಾಳ

ಜನವರಿ 22 ರಂದು ಕೊಲ್ಕತ್ತಾದಲ್ಲಿ ಐಕ್ಯತಾ ಯಾತ್ರೆಗೆ ಮಮತಾ ಕರೆ

ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗುತ್ತಿದ್ದು,  ಅದೇ ದಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಂಗಾಳದಲ್ಲಿ ‘ಐಕ್ಯತಾ ಯಾತ್ರೆ’  ಕಾರ್ಯಕ್ರಮಕ್ಕೆ ಕರೆ ನೀಡಿದರು.
Photo Credit : News Kannada

ಕೋಲ್ಕತ್ತಾ: ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗುತ್ತಿದ್ದು,  ಅದೇ ದಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಂಗಾಳದಲ್ಲಿ ‘ಐಕ್ಯತಾ ಯಾತ್ರೆ’  ಕಾರ್ಯಕ್ರಮಕ್ಕೆ ಕರೆ ನೀಡಿದರು.

ಸೋಮವಾರ 22 ರಂದು ಮಧ್ಯಾಹ್ನ 3 ಗಂಟೆಗೆ ಕಾಳಿಘಾಟ್‌ನಲ್ಲಿ ಮಮತಾ ಬ್ಯಾನರ್ಜಿ ಪೂಜೆ ಸಲ್ಲಿಸಲಿದ್ದಾರೆ. ಆಮೇಲೆ ಅಲ್ಲಿಂದ ಹೊರಡುತ್ತಾರೆ. ಹಜ್ರಾದಿಂದ ಐಕ್ಯತಾ ಯಾತ್ರೆ ಆರಂಭವಾಗಲಿದೆ.

ಆ ಬಳಿಕ ಮುಖ್ಯಮಂತ್ರಿಗಳು ಗಾರ್ಚಾ ರಸ್ತೆಯಲ್ಲಿರುವ ಹಜ್ರಾ ಕಾನೂನು ಕಾಲೇಜು ಎದುರಿನ ಗುರುದ್ವಾರಕ್ಕೆ ತೆರಳಲಿದ್ದಾರೆ.

ಅಲ್ಲಿಂದ ಪಾರ್ಕ್ ಸರ್ಕಸ್ ತಲುಪಿದ ಬಳಿಕ ಮಸೀದಿಗೆ ತೆರಳಲಿದ್ದಾರೆ. ಮುಂದೆ ಒಂದು ಚರ್ಚ್ ಇದೆ. ಅಲ್ಲಿಗೆ ಮಮತಾ ಬ್ಯಾನರ್ಜಿ ಕೂಡ ಹೋಗಲಿದ್ದಾರೆ. ನಂತರ ಪಾರ್ಕ್ ಸರ್ಕಸ್ ನಲ್ಲಿಯೇ ಸಭೆ ನಡೆಯಲಿದೆ. ವೇದಿಕೆಯಲ್ಲಿ ಮುಖ್ಯಮಂತ್ರಿ ಜತೆ ಎಲ್ಲ ಧಾರ್ಮಿಕ ಮುಖಂಡರು ಇರುತ್ತಾರೆ.

ಈ ಐಕ್ಯತಾ ಮೆರವಣಿಗೆಯನ್ನು ವಿರೋಧಿಸಿ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಕಲ್ಕತ್ತಾ ಹೈಕೋರ್ಟ್‌ಗೆ ಹೋಗಿದ್ದರು.

ಗುರುವಾರ ಮುಖ್ಯ ನ್ಯಾಯಮೂರ್ತಿಗಳ ಪೀಠದಲ್ಲಿ ಪ್ರಕರಣದ ವಿಚಾರಣೆ ನಡೆಯಿತು. ಷರತ್ತುಗಳಿಗೆ ಒಳಪಟ್ಟು ಈ ಒಗ್ಗಟ್ಟಿನ ಯಾತ್ರೆ ಕೈಗೊಳ್ಳಬಹುದು ಎಂದು ಕೋರ್ಟ್ ಆದೇಶ ನೀಡಿದೆ. ಒಗ್ಗಟ್ಟಿನ ಮೆರವಣಿಗೆಯಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಭಾಷಣ ಮಾಡುವಂತಿಲ್ಲ ಎಂದು ಕೋರ್ಟ್ ಹೇಳಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು