ಅಯೋಧ್ಯೆ: ಬಹುದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಚಟುವಟಿಕೆಗಳನ್ನು ನಿಲ್ಲಿಸಿ ಅದೃಶ್ಯರಾಗಿದ್ದ ಡಾ.ಬ್ರೋ ಹೊಸ ವರ್ಷದಂದು ಅಯೋಧ್ಯೆಯಲ್ಲಿ ಪ್ರತ್ಯಕ್ಷರಾಗಿದ್ದು, ಇದು ಅವರ ಅಭಿಮಾನಿಗಳ ಪಾಲಿಗೆ ಶುಭಸುದ್ದಿಯಾಗಿದೆ.
ರಾಮಜನ್ಮಭೂಮಿಯಾದ ಅಯೋಧ್ಯೆ ಹಾಗು ರಾಮಾಯಣಕ್ಕೆ ಹತ್ತಿರದ ಸಂಬಂಧವಿರುವ ನೇಪಾಳದ ಪರಿಚಯವನ್ನು ಅವರು ಮಾಡಿಸಿದ್ದಾರೆ. ರಾಮನಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಒಂದಾದ ಸರಯೂ ನದಿಯ ದಡಕ್ಕೆ ಭೇಟಿ ಕೊಟ್ಟ ಗಗನ್ ವೀಕ್ಷಕರಿಗೆ ಅದರ ಪರಿಚಯ ಮಾಡಿಸಿದರು. ನಂತರ ಹನುಮಾನ ಗಡಿಯಂತಹ ಇನ್ನೂ ಅನೇಕ ಸ್ಥಳಗಳಿಗೆ ತೆರಳಿ ದೇವಸ್ಥಾನಗಳ ದರ್ಶನ ಮಾಡಿಸಿದ್ದಾರೆ.
ಅಲ್ಲಿರುವ ಸಾಲಿಗ್ರಾಮ, ಸೀತಾ-ರಾಮರ ವಿಗ್ರಹ ಕೆತ್ತಲ್ಪಟ್ಟ ಕಲ್ಲಿನ ಇತಿಹಾಸಗಳಂತಹ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ನಂತರ ಸೀತಾಮಾತೆಯ ಜನ್ಮಸ್ಥಳವೆಂದು ನಂಬಲಾಗಿರುವ ನೇಪಾಳಕ್ಕೆ ತೆರಳಿ, ಅಲ್ಲಿನ ಕೆಲ ಸ್ಥಳಗಳು ಹಾಗು ಆಹಾರಗಳ ಪರಿಚಯ ಮಾಡಿಸಿದರು.