ನವದಹಲಿ: ಪರಸ್ಪರ ಸಹಾಯ ಮಾಡುವ, ಒಳಿತು ಮಾಡುವ ಮನೋಭಾವ ದೇಶದ ತಾಕತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಪ್ರಧಾನಿ ಮೋದಿ ಅವರು ಇಂದು ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ನ 103 ನೇ ಸಂಚಿಕೆಯನ್ನು ಉದ್ದೇಶಿಸಿ ಮಾತನಾಡಿದರು. ಯಮುನಾ ನದಿ ಸೇರಿದಂತೆ ದೇಶದ ಹಲವೆಡೆ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ, ಎನ್ಡಿಆರ್ಆರ್ಎಫ್ ಸಿಬ್ಬಂದಿ ಜತೆಗೆ ಸ್ಥಳೀಯರು ತುಂಬಾ ಸಹಾಯ ಮಾಡುತ್ತಿದ್ದಾರೆ, ಇದೇ ಮನೋಭಾವ ದೇಶದ ತಾಕತ್ತು ಎಂದರು.
ಹಜ್ ಯಾತ್ರೆಗೆ ಸಂಬಂಧಿಸಿದಂತೆ, ಈ ಬಾರಿಯ ಮನ್ ಕಿ ಬಾತ್ನಲ್ಲಿ ನನಗೂ ಹೆಚ್ಚಿನ ಸಂಖ್ಯೆಯಲ್ಲಿ ಪತ್ರಗಳು ಬಂದಿವೆ, ಅದು ಮನಸ್ಸಿಗೆ ಸಾಕಷ್ಟು ತೃಪ್ತಿಯನ್ನು ನೀಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.
ಉತ್ತರ ಪ್ರದೇಶದಲ್ಲಿ ಮಳೆಯ ನೀರು ಈಗ ಬಾವಿಗಳಿಗೆ ಸೇರುತ್ತಿದೆ, ಮತ್ತು ಈ ಬಾವಿಗಳ ನೀರು ಭೂಮಿಯ ಒಳಕ್ಕೆ ಹೋಗುತ್ತಿದೆ, ಇದರಿಂದಾಗಿ ಈ ಪ್ರದೇಶದಲ್ಲಿ ಅಂತರ್ಜಲ ಮಟ್ಟವು ಕ್ರಮೇಣ ಸುಧಾರಿಸುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಈಗ ಇಡೀ ಪ್ರದೇಶದಲ್ಲಿ ಸುಮಾರು 800 ಬಾವಿಗಳನ್ನು ರೀಚಾರ್ಜ್ಗೆ ಬಳಸಿಕೊಳ್ಳುವ ಗುರಿಯನ್ನು ಗ್ರಾಮಸ್ಥರೆಲ್ಲರೂ ಹೊಂದಿದ್ದಾರೆ. ಇದೇ ವೇಳೆ ಉತ್ತರ ಪ್ರದೇಶದಲ್ಲಿ 30 ಕೋಟಿ ಮರಗಳನ್ನು ನೆಟ್ಟು ದಾಖಲೆ ಮಾಡಿದ್ದೇವೆ ಎಂದರು.
ತಮ್ಮ ಅಮೆರಿಕ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ನಮ್ಮ ಪ್ರಾಚೀನ ಕಲಾಕೃತಿಗಳು ಮತ್ತು ಅಮೂಲ್ಯವಾದ ಪರಂಪರೆಯನ್ನು ಹಿಂದಿರುಗಿಸಿದ ಅಮೆರಿಕ ಸರ್ಕಾರಕ್ಕೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಹೇಳಿದರು.