ಬೆಂಗಳೂರು: ಹಾಸನದ ಅಶ್ಲೀಲ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಸ್ಫೋಟಕ ಹೇಳಿಕೆ ನೀಡಿದ್ದಾರೆ. ದೂರು ಕೊಟ್ಟ ಮಹಿಳೆ ಕಿಡ್ನಾಪ್ ಆಗಿದ್ದು, ಎಸ್ಐಟಿ ಪೊಲೀಸರು ಸಂತ್ರಸ್ತೆಯನ್ನು ರಕ್ಷಣೆ ಮಾಡಿದ್ದಾರೆ.
ಎಸ್ಐಟಿ ವಶದಲ್ಲಿರುವ ಕಿಡ್ನಾಪ್ ಆಗಿದ್ದ ಮಹಿಳೆ, ಆಕೆಯ ಮೇಲೆ ಆಗಿದ್ದ ಲೈಂಗಿಕ ದೌರ್ಜನ್ಯ ಕುರಿತು ಕಣ್ಣೀರು ಇಟ್ಟಿದ್ದಾಳೆ. ಈ ಬಗ್ಗೆ ವಿವರಿಸಿದ ಆಕೆ ನನ್ನ ಮೇಲೆ ಅತ್ಯಾಚಾರ ಮಾಡಿದ್ದು ಹೆಚ್.ಡಿ ರೇವಣ್ಣ ಅಲ್ಲ. ಪ್ರಜ್ವಲ್ ರೇವಣ್ಣ ನನ್ನ ಮೇಲೆ ರೇಪ್ ಮಾಡಿದ್ದಾರೆ ಎಂದು ಎಸ್ಐಟಿ ಎದುರು ಮಹಿಳೆ ಕಣ್ಣೀರ್ ಇಡುತ್ತಾ ತಿಳಿಸಿದ್ದಾಳೆ.ಇದೇ ಹೇಳಿಕೆಯನ್ನು ಸಂತ್ರಸ್ತೆ ನ್ಯಾಯಾಧೀಶರ ಎದುರು ನೀಡಲು ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.