ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ವಾರ್ಷಿಕೋತ್ಸವದಂದೇ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ರಚಿಸಿದ್ದಾರೆ.
ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ಮನಮೋಹನ್ ಸಿಂಗ್, ಆಲ್ಫಾ ಲಂಬಾ, ಸುಪ್ರಿಯಾ ಶ್ರೀನಾಟೆ, ಪ್ರಣಿತಿ ಶಿಂಧೆ, ಸಚಿನ್ ಪೈಲಟ್, ಶಶಿ ತರೂರ್, ನಾಸೀರ್ ಹುಸೇನ್, ಪವನ್ ಖೇರಾ, ಗಣೇಶ್ ಗೋಡಿಯಾಲ್, ಯಶೋಮತಿ ಠಾಕೂರ್ ಅವರು ಕಾರ್ಯಕಾರಿ ಸಮಿತಿಯಲ್ಲಿ ಸ್ಥಾನ ಪಡೆದಿದ್ದಾರೆ.
ಛತ್ತೀಸಗಢದ ರಾಯಪುರದಲ್ಲಿ ಪಕ್ಷದ 85ನೇ ಮಹಾಅಧಿವೇಶನದ ಭಾಗವಾಗಿ ಫೆಬ್ರುವರಿಯಲ್ಲಿ ನಡೆದ ಕಾಂಗ್ರೆಸ್ ಚಾಲನಾ ಸಮಿತಿ ಸಭೆಯು ಸಿಡಬ್ಲ್ಯುಸಿಗೆ ಸದಸ್ಯರ ನೇಮಕಕ್ಕೆ ಚುನಾವಣೆಯನ್ನು ನಡೆಸದಿರಲು ನಿರ್ಧರಿಸಿತ್ತು.
ಖಾಯಂ ಆಹ್ವಾನಿತ ಸದಸ್ಯರು: ಅಲ್ಲದೆ ಪಕ್ಷವು ವೀರಪ್ಪ ಮೊಯ್ಲಿ, ಹರೀಶ್ ರಾವತ್, ಪವನ್ ಕುಮಾರ್ ಬನ್ಸಾಲ್, ಮೋಹನ್ ಪ್ರಕಾಶ್, ರಮೇಶ್ ಚೆನ್ನಿತ್ತಲ, ಬಿ.ಕೆ. ಹರಿಪ್ರಸಾದ್, ಪ್ರತಿಭಾ ಸಿಂಗ್, ಮನೀಶ್ ತಿವಾರಿ, ತಾರಿಕ್ ಹಮೀದ್ ಕರ್ರಾ, ದೀಪೇಂದರ್ ಸಿಂಗ್ ಹೂಡಾ, ಗಿರೀಶ್ ರಾಯ ಚೋಡಂಕರ್, ಟಿ. ಸುಬ್ಬರಾಮಿ ರೆಡ್ಡಿ, ಕೆ.ರಾಜು, ಚಂದ್ರಕಾಂತ್ ಹಂದೋರೆ, ಮೀನಾಕ್ಷಿ ನಟರಾಜನ್, ಫುಲೋ ದೇವಿ ನೇತಂ, ದಾಮೋದರ ರಾಜ ನರಸಿಂಹ ಮತ್ತು ಸುದೀಪ್ ರಾಯ್ ಬರ್ಮನ್ ಅವರನ್ನು ಖಾಯಂ ಆಹ್ವಾನಿತ ಸದಸ್ಯರೆಂದು ಪರಿಗಣಿಸಿದೆ.