News Karnataka Kannada
Saturday, April 27 2024
ದೆಹಲಿ

ನವದೆಹಲಿ: ಮಂಗಳೂರಿಗೆ ಖಾದರ್, ಬೈಂದೂರಿಗೆ ಗೋಪಾಲ ಪೂಜಾರಿ, ಕಾಪುವಿನಿಂದ ಸೊರಕೆ

Vijayapura: Three sitting MLAs confirmed of hand tickets, rest uncertain
Photo Credit : News Kannada

ನವದೆಹಲಿ: ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದೆ. ಆದರೆ ಪಟ್ಟಿ ಯುಗಾದಿ ಬಳಿಕ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಮಂಗಳೂರಿನಿಂದ ಹಾಲಿ ಶಾಸಕ ಯು.ಟಿ. ಖಾದರ್ ಹಾಗೂ ಬೈಂದೂರಿನಿಂದ ಗೋಪಾಲ ಪೂಜಾರಿಗೆ ಟಿಕೆಟ್ ಬಹುತೇಕ ಖಚಿತವಾಗಿದೆ. ಕಾಪು ಕ್ಷೇತ್ರದಿಂದ ವಿನಯಕುಮಾರ್ ಸೊರಕೆ ಹೆಸರು ಮುಂಚೂಣಿಯಲ್ಲಿದೆ.

ದಿಲ್ಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕೇಂದ್ರ ಚುನಾವಣ ಸಮಿತಿಯು 3 ಗಂಟೆ ಅ ಹೆಚ್ಚುಕಾಲ ಸಭೆ ನಡೆಸಿ ಸ್ಕ್ರೀನಿಂಗ್‌ ಕಮಿಟಿಯು ಶಿಫಾರಸು ಮಾಡಿದ್ದ ಪಟ್ಟಿ ಕುರಿತು ಚರ್ಚೆ ನಡೆಸಿತು. ಕಾಂಗ್ರೆಸ್‌ ನ 60 ಹಾಲಿ ಶಾಸಕರ ಪೈಕಿ ಐದಾರು ಕ್ಷೇತ್ರಗಳನ್ನು ಹೊರತುಪಡಿಸಿ, ಉಳಿದವರೆಲ್ಲರಿಗೂ ಟಿಕೆಟ್ ಖಾತರಿಯಾಗಿದೆ.

ಇವರೆಲ್ಲರಿಗೆ ಟಿಕೇಟ್‌ ನಿಶ್ಚಿತ: ಅಶೋಕ ಪಟ್ಟಣ-ರಾಮದುರ್ಗ, ಉಮಾಶ್ರೀ- ತೇರದಾಳ, ಜಿ.ಟಿ. ಪಾಟೀಲ್-ಬೆಳಗಿ, ವಿಜಯಾನಂದ ಕಾಶಪ್ಪನವರ್-ಹುನಗುಂದ, ಡಾ. ಶರಣ ಪ್ರಕಾಶ್ ಮರ- ಸೇಡಂ, ಬಿ.ಆರ್. ಪಾಟೀಲ್‌ -ಆಳಂದ, ಲಿಂಗಸುಗೂರು- ರುದ್ರಯ್ಯ, ಹಂಪನಗೌಡ ಬಾದರ್ಲಿ ಸಿಂಧನೂರು, ಶಿವರಾಜ ತಂಗಡಗಿ-ಕನಕಗಿರಿ: ಬಸವರಾಜ ರಾಯರೆಡ್ಡಿ, ಯಲಬುರ್ಗಾ, ಮೋಹನ ಲಿಂಬಿಕಾಯಿ- ಧಾರವಾಡ ಪರ್ವ, ಸಂತೋಷ್ ಲಾಡ್-ಕಲಘಟಗಿ, ಸತೀಶ್ ಸೈಲ್ ಕಾರವಾರ, ನಿವೇದಿತಾ ಆಳ್ವ ಕುಮಟಾ, ಭೀಮಣ್ಣ ನಾಯಕ- ಶಿರಸಿ, ವಿ.ಎಸ್‌. ಪಾಟೀಲ್ – ಯಲ್ಲಾ ಸ್ಪರ, ಯು.ಬಿ. ಬಣಕಾರ, ಹಿರೇಕೆರೂರು, ಪ್ರಕಾಶ ಕೋಳಿವಾಡ- ರಾಣಿಬೆನ್ನೂರು, ಪ್ರಸನ್ನಕುಮಾರ್ – ಶಿವಮೊಗ್ಗ ಮಧು ಬಂಗಾರಪ್ಪ ಸೊರಬ, ಗೋಪಾಲ ಪೂಜಾರಿ- ಬೈಂದೂರು, ವೈ.ಎಸ್.ವಿ ದತ್ತಾ, ಕಡೂರು, ಕಿರಣ್ ಕುಮಾರ್ -ಚಿಕ್ಕನಾಯಕನಹಳ್ಳಿ, ಟಿ.ಬಿ. ಜಯಚಂದ್ರ- ಶಿಲಾ, ಶ್ರೀನಿವಾಸ್ -ಗುಬ್ಬಿ, ರಾಜಣ್ಣ, ದುರುಗಿರಿ, ಡಾ. ಎಂ.ಸಿ. ಸುಧಾಕರ್ – ಚಿಂತಾಮಣಿ, ಸುಮಾ ಹನುಮಂತರಾಯಪ್ಪ- ರಾಜರಾಜೇಶ್ವರಿ ನಗರ, ಗಣೇಶ್ ಪ್ರಸಾದ್- ಗುಂಡ್ಲುಪೇಟೆ ಯು.ಬಿ. ವಂಕಟೇಶ್ – ಬಸವನಗುಡಿ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆಗಳು ಹೆಚ್ಚಿವೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು