ಗುವಾಹಟಿ, ;ಬುಸ್ಕಾನ್ ಗಡಿ ಬಳಿಯ ಎರಡು ಆನೆಗಳು ವಿದ್ಯುತ್ ಸ್ಪರ್ಶಕ್ಕೆ ಬಲಿಯಾಗಿವೆ. ಬಸ್ಕಾ ಜಿಲ್ಲೆಯ ಬತಬಾರಿ ಅರಣ್ಯ ವಲಯದ ಕೋರಿಬಾರಿ ಗ್ರಾಮದ ಬಳಿ ಈ ಘಟನೆ ನಡೆದಿದೆ. ವಿದ್ಯುತ್ ಬೇಲಿಯನ್ನು ಕಟ್ಟಲಾಗಿತ್ತು. ಅದನ್ನು ಕಾಣದೆಯೇ ಆನೆಗಳು ದಾಟಲು ಮುಂದಾಗಿದ್ದಾಗ ಈ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ.
ಈ ಹೆಣ್ಣು ಆನೆಗಳು ಭೂತಾನ್ನ ಬೆಟ್ಟ ಪ್ರದೇಶದಿಂದ ಆಹಾರ ಹುಡುಕಿಕೊಂಡು ಈ ಕಡೆ ಬಂದಿರಬಹುದು ಎಂದು ಹೇಳಲಾಗಿದೆ. ಗ್ರಾಮದ ರೀಶನ್ ಎಂಬ ವ್ಯಕ್ತಿ ತಾನು ಬೆಳೆದ ಬೆಳೆಯನ್ನು ರಕ್ಷಿಸಿಕೊಳ್ಳಲು ಹಾಕಿಕೊಂಡಿದ್ದ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ಬೆಳಗ್ಗೆ ಈ ಪ್ರದೇಶದ ಬಳಿ ಮಹಿಳೆಯೊಬ್ಬರು ಹೋಗುವಾಗ ಸತ್ತು ಬಿದ್ದಿರುವ ಆನೆಯನ್ನು ನೋಡಿ ಪೊಲೀಸರಿಗೆ ವಿಷಯ ತಿಳಿಸಿದ್ದರು. ಈ ರೀತಿ ಭೂತಾನ್ ಗಡಿಗಳಿಂದ ಆನೆಗಳು ಆಗಾಗ ಬರುತ್ತವೆ. ಮತ್ತು ರೈತರು ಬೆಳೆದ ಬೆಳೆಗಳನ್ನು ನಾಶಪಡಿಸುತ್ತಿರುತ್ತವೆ. ಅವುಗಳು ಗಡಿ ದಾಟಿ ಹೇಗೆ ಬರುತ್ತವೆ ಎಂಬುದೇ ಆಶ್ಚರ್ಯಕರವಾಗಿದ್ದು , ತನಿಖೆ ಕೂಡ ನಡೆಸಲಾಗುತ್ತಿದೆ.
ವಿದ್ಯುತ್ ಸ್ಪರ್ಶಕ್ಕೆ ಎರಡು ಆನೆಗಳ ಬಲಿ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.