News Karnataka Kannada
Thursday, May 02 2024
ಅಸ್ಸಾಂ

ವಿದ್ಯುತ್‌ ಸ್ಪರ್ಶಕ್ಕೆ ಎರಡು ಆನೆಗಳ ಬಲಿ

Wild Elephent Mysore 14082021
Photo Credit :

ಗುವಾಹಟಿ, ;ಬುಸ್ಕಾನ್ ಗಡಿ ಬಳಿಯ ಎರಡು ಆನೆಗಳು ವಿದ್ಯುತ್ ಸ್ಪರ್ಶಕ್ಕೆ ಬಲಿಯಾಗಿವೆ. ಬಸ್ಕಾ ಜಿಲ್ಲೆಯ ಬತಬಾರಿ ಅರಣ್ಯ ವಲಯದ ಕೋರಿಬಾರಿ ಗ್ರಾಮದ ಬಳಿ ಈ ಘಟನೆ ನಡೆದಿದೆ. ವಿದ್ಯುತ್ ಬೇಲಿಯನ್ನು ಕಟ್ಟಲಾಗಿತ್ತು. ಅದನ್ನು ಕಾಣದೆಯೇ ಆನೆಗಳು ದಾಟಲು ಮುಂದಾಗಿದ್ದಾಗ ಈ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ.
ಈ ಹೆಣ್ಣು ಆನೆಗಳು ಭೂತಾನ್‍ನ ಬೆಟ್ಟ ಪ್ರದೇಶದಿಂದ ಆಹಾರ ಹುಡುಕಿಕೊಂಡು ಈ ಕಡೆ ಬಂದಿರಬಹುದು ಎಂದು ಹೇಳಲಾಗಿದೆ. ಗ್ರಾಮದ ರೀಶನ್ ಎಂಬ ವ್ಯಕ್ತಿ ತಾನು ಬೆಳೆದ ಬೆಳೆಯನ್ನು ರಕ್ಷಿಸಿಕೊಳ್ಳಲು ಹಾಕಿಕೊಂಡಿದ್ದ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ಬೆಳಗ್ಗೆ ಈ ಪ್ರದೇಶದ ಬಳಿ ಮಹಿಳೆಯೊಬ್ಬರು ಹೋಗುವಾಗ ಸತ್ತು ಬಿದ್ದಿರುವ ಆನೆಯನ್ನು ನೋಡಿ ಪೊಲೀಸರಿಗೆ ವಿಷಯ ತಿಳಿಸಿದ್ದರು. ಈ ರೀತಿ ಭೂತಾನ್ ಗಡಿಗಳಿಂದ ಆನೆಗಳು ಆಗಾಗ ಬರುತ್ತವೆ. ಮತ್ತು ರೈತರು ಬೆಳೆದ ಬೆಳೆಗಳನ್ನು ನಾಶಪಡಿಸುತ್ತಿರುತ್ತವೆ. ಅವುಗಳು ಗಡಿ ದಾಟಿ ಹೇಗೆ ಬರುತ್ತವೆ ಎಂಬುದೇ ಆಶ್ಚರ್ಯಕರವಾಗಿದ್ದು , ತನಿಖೆ ಕೂಡ ನಡೆಸಲಾಗುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು