ದಾವಣಗೆರೆ : ಬಿಜೆಪಿ ಸರಕಾರದ ಬಗ್ಗೆ ಯಾವಾಗಲೂ ಋುಣಾತ್ಮಕವಾಗಿ ಮಾತನಾಡುತ್ತಲೇ ಇರುವ , ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು 10 ದಿನ ವಿಶ್ರಾಂತಿಗೆ ಜಿಂದಾಲ್ಗೆ ತೆರಳಲಿದ್ದಾರೆಂದು ತಿಳಿದು ಬಂದಿದ್ದು ಅಲ್ಲಿಂದ ಬಂದ ಮೇಲಾದರೂ ಒಳ್ಳೆಯ ಮಾತನಾಡಲಿ ಎಂದು ವಸತಿ ಸಚಿವ ವಿ. ಸೋಮಣ್ಣ ಛೇಡಿಸಿದ್ದಾರೆ.
ಶನಿವಾರ ದಾವಣಗೆರೆಯಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಸಿದ್ಧರಾಮಯ್ಯ ಅವರು ಚರ್ಚೆಗೆ ಕರೆಯಲಿ, ನಮ್ಮ ಸರಕಾರದಲ್ಲಿ ಏನಾಗುತ್ತಿದೆ, ಏನೇನು ಅಭಿವೃದ್ಧಿ ಆಗುತ್ತಿದೆ ಎಂಬುದನ್ನು ನಾನೇ ವಿವರಿಸುತ್ತೇನೆ ಎಂದು ಸವಾಲು ಹಾಕಿದರು.