ಹೈದರಾಬಾದ್: ರಾಖಿ ಕಟ್ಟಲೆಂದೇ ಐವರು ಸೋದರಿಯರು ಅಣ್ಣನ ಮನೆಗೆ ಬಂದ ದಿನ, ಅಣ್ಣ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಚಿಂತಪಲ್ಲಿ ಲಕ್ಷ್ಮಯ್ಯ (59) ಮೃತರಾಗಿದ್ದಾರೆ. ರಕ್ಷಾಬಂಧನದಂದು ಅಣ್ಣನಿಗೆ ರಾಖಿ ಕಟ್ಟಲೆಂದೇಂದು ಸಹೋದರಿಯರು ಬಂದ ದಿನವೇ ಈತ ಪ್ರಾಣ ಬಿಟ್ಟಿದ್ದಾನೆ. ಐವರು ಸಹೋದರಿಯರು ಕಣ್ಣೀರು ಹಾಕುತ್ತಾ ಅಣ್ಣನ ಕೈಗೆ ರಾಖಿ ಕಟ್ಟಿದ್ದಾರೆ. ರಾಖಿ ಕಟ್ಟಲೆಂದು ಐವರು ಸೋದರಿಯರು ಶನಿವಾರ ಸಂಜೆಯೇ ವಿವಿಧ ಗ್ರಾಮಗಳಿಂದ ತವರುಮನೆಗೆ ಬಂದಿದ್ದರು. ಮರುದಿನ ಬೆಳಗ್ಗೆಯಷ್ಟೊತ್ತಿಗೆ ಲಕ್ಷ್ಮಯ್ಯ ಆಕಸ್ಮಾತ್ ಆಗಿ ಅನಾರೋಗ್ಯಕ್ಕೀಡಾಗಿ ಮೃತಪಟ್ಟಿದ್ದಾನೆ. ತೆಲಂಗಾಣದ ನಲಗೊಂದಾ ಜಿಲ್ಲೆಯ ಇಂಡುಗುಲಾ ಗ್ರಾಮ ಪಂಚಾಯಿತಿಯಲ್ಲಿ ಈ ಘಟನೆ ನಡೆದಿದೆ.