ಮುಂಬೈ, ; ಸ್ವಾತಂತ್ರ್ಯ ದಿನಾಚರಣೆಯ ಬಗ್ಗೆ ಅಜ್ಞಾನದ ಮಾತುಗಳನ್ನಾಡಿರುವ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಕೆನ್ನೆಗೆ ಭಾರಿಸುತ್ತಿದ್ದೆ ಎಂದು ಹೇಳಿಕೆ ನೀಡಿದ ಕೇಂದ್ರ ಸಚಿವ ನಾರಾಯಣರಾಣೆ ಅವರ ಮನೆಗೆ ಬಿಗಿ ಭದ್ರತೆ ಆಯೋಜಿಸಾಗಿದೆ. ಸ್ವಾತಂತ್ರ್ಯ ದಿನಾಚರಣೆಯ ವೇಳೆ ಭಾಷಣ ಮಾಡುವಾಗ ಉದ್ಧವ್ ಠಾಕ್ರೆ ಸ್ವಾತಂತ್ರ್ಯ ಬಂದ ವರ್ಷದ ಬಗ್ಗೆ ಅಸ್ಪಷ್ಟ ಹೇಳಿಕೆ ನೀಡಿದ್ದರು.
ಅದನ್ನು ಜನಾಶೀರ್ವಾದ ಯಾತ್ರೆಯಲ್ಲಿ ತರಾಟೆಗೆ ತೆಗೆದುಕೊಂಡಿದ್ದ ನೂತನ ಕೇಂದ್ರ ಸಚಿವ ನಾರಯಣರಾಣೆ, ಮುಖ್ಯಮಂತ್ರಿ ಭಾಷಣ ಮಾಡುವಾಗ ನಾನು ಅಲ್ಲಿದ್ದರೆ ಕಪ್ಪಾಲಕ್ಕೆ ಜೋರಾಗಿ ಭಾರಿಸುತ್ತಿದ್ದೆ ಎಂದಿದ್ದರು. ಆ ಹೇಳಿಕೆ ಬೆನ್ನಲ್ಲೆ ಪರ ವಿರೋಧ ಚರ್ಚೆಗಳು ಆರಂಭವಾದವು. ಶಿವಸೇನೆಯ ಕಾರ್ಯಕರ್ತರು, ಮಹಿಳೆಯರು ಪ್ರತಿಭಟನಾ ಫಲಕಗಳನ್ನು ಹಿಡಿದು ಜಹು ರಸ್ತೆಯಲ್ಲಿರುವ ಯವಸೇನಾ ಕಚೇರಿಯ ಬಳಿ ಜಮಾವಣೆಗೊಂಡು ಘೊಷಣೆ ಕೂಗಿದರು.
ಯಾವುದೇ ರೀತಿಯ ಅಹಿತಕರ ಘಟನೆಗಳು ವರದಿಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಸಾಂತಾಕ್ರೂಜ್ ಪಶ್ಚಿಮ ಪ್ರದೇಶದ ಜಹುತಾರಾ ರಸ್ತೆಯಲ್ಲಿರುವ ನಾರಾಯಣರಾಣೆ ಅವರ ಮನೆಗೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು. ಮಹಿಳಾ ಸಿಬ್ಬಂದಿಗಳು ಸೇರಿದಂತೆ ಅಪಾರ ಪ್ರಮಾಣದ ಪೊಲೀಸರನ್ನು ನಿಯೋಜಿಸಲಾಗಿದೆ. ಇದಕ್ಕೂ ಮುನ್ನಾ ಬಿಜೆಪಿ ಕಾರ್ಯಕರ್ತರು ತಮ್ಮ ನಾಯಕನ ಮನೆ ಬಳಿ ಜಮಾವಣೆಗೊಳ್ಳುವ ಮೂಲಕ ನಾರಾಯಣರಾಣೆಗೆ ಬೆಂಬಲ ವ್ಯಕ್ತ ಪಡಿಸಿದ್ದಾರೆ.
ಮಹಾರಾಷ್ಟ್ರ ಮುಖ್ಯ ಮಂತ್ರಿ ಬಗ್ಗೆ ಕಮೆಂಟ್ ; ಕೇಂದ್ರ ಸಚಿವ ನಾರಾಯಣರಾಣೆ ಮನೆಗೆ ಬಿಗಿ ಭದ್ರತೆ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.