ಕಾಬೂಲ್, ; ದೇಶ ಬಿಟ್ಟು ಹೋಗುವ ಧಾವಂತದಲ್ಲಿ ಗುಂಪುಗೂಡಿದ್ದ ಜನರನ್ನು ಚದುರಿಸಲು ತಾಲಿಬಾನಿಗಳು ಗುಂಡು ಹಾರಿಸಿದ್ದು, ಭಾನುವಾರದಿಂದ ಈವರೆಗೆ 12 ಮಂದಿ ಮೃತ ಪಟ್ಟಿದ್ದಾರೆ ಎಂದು ವರದಿಯಾಗಿದೆ. ಈ ನಡುವೆ ಅಮೆರಿಕಾ ಆಫ್ಘಾನಿಸ್ತಾನ ಸರ್ಕಾರಕ್ಕೆ ಶಸ್ತ್ರಾಸ್ತ್ರಾ ಮಾರಾಟ ಒಪ್ಪಂದವನ್ನು ತಡೆ ಹಿಡಿದಿದೆ. ಆಫ್ಘಾನಿಸ್ತಾನ ಬಿಟ್ಟು ಯಾರು ಹೊರ ಹೋಗುವ ಅಗತ್ಯ ಇಲ್ಲ.
ಎಲ್ಲರೂ ತಮ್ಮ ಮನೆಯಲ್ಲೇ ಇರಬೇಕು ಎಂದು ತಾಲಿಬಾನಿಗಳು ಸೂಚಿಸಿದ್ದಾರೆ. ಭಾನುವಾರದಿಂದ ಕಾಬೂಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ದೇಶ ಬಿಟ್ಟು ಹೋಗಲು ಪ್ರತಿನಿತ್ಯ ಸಾವಿರಾರು ಮಂದಿ ಆಗಮಿಸುತ್ತಲೇ ಇದ್ದಾರೆ. ಕೆಲವರು ದಾಂಧಲೆ, ಗಲಾಟೆ ಮಾಡುತ್ತಿದ್ದಾರೆ. ಪರಿಸ್ಥಿತಿಯ ಲಾಭ ಪಡೆದು ಲೂಟಿ, ಜೇಬುಗಳ್ಳತನ ಇತರ ಅಪರಾಧ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಗುಂಪು ಚದುರಿಸಲು ತಾಲಿಬಾನಿಗಳು ಪದೇ ಪದೇ ಗುಂಡು ಹಾರಿಸುತ್ತಿದ್ದಾರೆ. ಇದರಿಂದ ಭಾನುವಾರದಿಂದ ಈವರೆಗೆ 12 ಮಂದಿ ಸಾವನ್ನಪ್ಪಿರುವುದಾಗಿ ಅಧಿಕೃತ ಮೂಲಗಳು ಖಚಿತ ಪಡಿಸಿವೆ.ಅಮೆರಿಕಾ ಅಧ್ಯಕ್ಷ ಜೋ ಬಿಡೇನ್ ತಮ್ಮ ದೇಶದ ಪ್ರಜೆಗಳು ಹಾಗೂ ರಾಜತಾಂತ್ರಿಕರನ್ನು ಹಿಂಪಡೆಯಲು ಪ್ರಯತ್ನ ಮುಂದುವರೆಸಿರುವುದಾಗಿ ಹೇಳಿದ್ದಾರೆ. ಆಗಸ್ಟ್ 31ರ ಒಳಗೆ ಅಮೆರಿಕಾದ ಎಲ್ಲಾ ಸೇನಾ ಪಡೆಗಳು ಆಫ್ಘಾನಿಸ್ತಾನದಿಂದ ವಾಪಾಸ್ ಕರೆಸಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ತಾಲಿಬಾನಿಗಳ ಗುಂಡಿಗೆ ಈವರೆಗೆ ಬಲಿಯಾದವರೆಷ್ಟು ಗೊತ್ತಾ ?
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.