ಲಕ್ನೋ: ಕಾಂಗ್ರೆಸ್ ನ್ನು ಬದಿಗಿಟ್ಟು ಮೈತ್ರಿ ಮಾಡಿಕೊಂಡ ಎಸ್ ಪಿ ಮತ್ತು ಬಿಎಸ್ ಪಿಗೆ ಸಡ್ಡು ಹೊಡೆದಿರುವ ಕಾಂಗ್ರೆಸ್, ಉತ್ತರ ಪ್ರದೇಶದ ಎಲ್ಲಾ 80 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಹೇಳಿದೆ.
ಫೆಬ್ರವರಿ ತಿಂಗಳಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ 13 ದೊಡ್ಡ ರ್ಯಾಲಿಗಳನ್ನು ನಡೆಸಲಿದ್ದಾರೆ.
ಕಾಂಗ್ರೆಸ್ ಪಕ್ಷದ ನಾಯಕ ಗುಲಾಂ ನಬಿ ಅಜಾದ್ ಮತ್ತು ಪಕ್ಷದ ಉತ್ತರ ಪ್ರದೇಶ ಉಸ್ತುವಾರಿ ರಾಜ್ ಬಬ್ಬರ್ ಭಾನುವಾರ ಭೇಟಿಯಾಗಿ ಈ ಸಂಬಂಧ ಚರ್ಚಿಸಿ, ಪಕ್ಷದ ಯೋಜನೆಗೆ ಅಂತಿಮ ರೂಪುದೇಷೆ ನೀಡುವರು ಎಂದು ವರದಿಗಳು ತಿಳಿಸಿವೆ.
80 ಲೋಕಸಭಾ ಕ್ಷೇತ್ರಗಳು ಇರುವಂತಹ ಉತ್ತರ ಪ್ರದೇಶದಲ್ಲಿ ಎಸ್ ಪಿ ಮತ್ತು ಬಿಎಸ್ ಪಿ ತಲಾ 38 ಸ್ಥಾನಗಳನ್ನು ಹಂಚಿಕೊಂಡಿದೆ. ಉಳಿದ ಎರಡು ಸ್ಥಾನ ಕಾಂಗ್ರೆಸ್ ಮತ್ತು ರಾಷ್ಟ್ರೀಯ ಲೋಕದಳದ ಅಜಿತ್ ಸಿಂಗ್ ಅವರಿಗೆ ಬಿಟ್ಟುಕೊಟ್ಟಿತ್ತು.
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಗೆ ಹೆಚ್ಚಿನ ಬೆಂಬಲವಿಲ್ಲವೆಂದು ಎಸ್ ಪಿ ಮತ್ತು ಬಿಎಸ್ ಪಿ ಹೇಳಿರುವುದು ಕಾಂಗ್ರೆಸ್ ನಾಯಕರನ್ನು ಆಕ್ರೋಶಕ್ಕೀಡು ಮಾಡಿದೆ.