ನವದೆಹಲಿ ; ಇತ್ತೀಚಿಗೆ ಆಫ್ಘಾನಿಸ್ತಾನದ ಜೈಲುಗಳಿಂದ ಬಿಡುಗಡೆಯಾದ 100ಕ್ಕೂ ಜೈಷ್-ಇ-ಮೊಹಮ್ಮದ್ ಉಗ್ರರು ಜಮ್ಮು-ಕಾಶ್ಮೀರ ಸೇರಿಂತೆ ಭಾರತದಲ್ಲಿ ವಿದ್ವಂಶಕ ಕೃತ್ಯಗಳನ್ನು ನಡೆಸಲು ಸಜ್ಜಾಗಿದ್ದಾರೆ ಎಂಬ ಆತಂಕಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಭಾರತೀಯ ಭದ್ರತಾ ಪಡೆಗಳ ಮಾಹಿತಿ ಪ್ರಕಾರ ಭಾರತ ವಿರೋಧಿ ಮನಸ್ಥಿತಿ ಹೊಂದಿರುವ ಉಗ್ರಗಾಮಿಗಳನ್ನು ತಾಲಿಬಾನ್ ಆಫ್ಘಾನಿಸ್ತಾನ್ ಜೈಲುಗಳಿಂದ ಬಿಡುಗಡೆ ಮಾಡಿದೆ.
ಅವರು ಮತ್ತೆ ಜೈಷ್-ಇ-ಮೊಹಮ್ಮದ್ ಸಂಘಟನೆಗೆ ಸೇರ್ಪಡೆಯಾಗಿದ್ದು, ಭಾರತದಾದ್ಯಂತ ಹಿಂಸಾತ್ಮಕ ಕೃತ್ಯಗಳನ್ನು ನಡೆಸಲು ಮುಂದಾಗಿದ್ದಾರೆ. ಈ ಬಗ್ಗೆ ಜೈಷ್-ಇ-ಮೊಹಮ್ಮದ್ ಸಂಘಟನೆಯೊಂದಿಗೆ ಸಂಪರ್ಕ ಇರುವ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಪೋಸ್ಟ್ಗಳು ಲಭ್ಯವಾಗಿವೆ ಎಂದು ಹೇಳಲಾಗಿದೆ. ಜೈಷ್-ಇ.ಮೊಹಮ್ಮದ್ ಸಂಘಟನೆಯ ಉನ್ನತ ನಾಯಕ ಮಸೂದ್ ಅಜರ್ ದಾಳಿಯ ಯೋಜನೆ ರೂಪಿಸಿದ್ದಾನೆ ಎಂದು ಹೇಳಲಾಗಿದೆ.
ಆಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಜಯ ಉಗ್ರಸಂಘಟನೆಗಳಿಗೆ ಮತ್ತಷ್ಟು ಉತ್ತೇಜನ ನೀಡಿದ್ದು, ಉಗ್ರ ಚಟುವಟಿಕೆಗಳ ಮೂಲಕವೇ ಸಾಂಸ್ಥಿಕ ನಿಯಂತ್ರಣ ಸಾಧಿಸಲು ಸಾಧ್ಯ. ಕಳೆದ ವಾರದ ನಮ್ಮವರು ಹಾರಿಸಿದ ವಿಜಯಪತಾಕೆ ಮಾದರಿ ಎಂದು ಮಸೂದ್ ಅಜರ್ ಹೇಳಿಕೊಂಡಿದ್ದಾನೆ ಎಂದು ಭದ್ರತಾ ಪಡೆಗಳು ಗುರುತಿಸಿವೆ.
ಅಫ್ಘಾನ್ ಜೈಲುಗಳಿಂದ ಹೊರಬಂದ ಉಗ್ರರ ಟಾರ್ಗೆಟ್ ಭಾರತ ?
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.