News Karnataka Kannada
Monday, May 06 2024
ದೇಶ

ವಕೀಲರ ಮುಷ್ಕರ ಹತ್ತಿಕ್ಕಲು ನಿಯಮಾವಳಿ ರಚನೆ

Supreem Mai Newsk 3834246588
Photo Credit :

ನವದೆಹಲಿ, ;ವಕೀಲರ ಮುಷ್ಕರಕ್ಕೆ ಕಡಿವಾಣ ಹಾಕಲು, ನ್ಯಾಯಾಲಯ ಕಲಾಪ ಬಹಿಷ್ಕರಕ್ಕೆ ನಿಯಂತ್ರಣ ಹೇರುವುದು ಮತ್ತು ಸಾಮಾಜಿಕ ಜಾಲತಾಣದಲ್ಲಿ ಮುಷ್ಕರಕ್ಕೆ ಪ್ರಚೋದನೆ ನೀಡುವವರ ವಿರುದ್ಧ ಕ್ರಮ ಕೈಗೊಳ್ಳಲು ಅನುಕೂಲವಾಗುವಂತೆ ನಿಯಾಮವಳಿಗಳನ್ನು ರಚಿಸುತ್ತಿರುವುದಾಗಿ ಬಾರ್ ಕೌನ್ಸಿಲ್ ಆಫ್ ಇಂಡಿಯಾ(ಬಿಸಿಐ) ಸುಪ್ರೀಂಕೋರ್ಟ್‍ಗೆ ಹೇಳಿದೆ.
ಸುಪ್ರೀಂಕೋರ್ಟ್‍ನ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಎಂ.ಆರ್.ಶಾ ಅವರುಗಳನ್ನೊಳಗೊಂಡ ವಿಭಾಗೀಯ ಪೀಠ ಸ್ವಯಂ ಪ್ರೇರಿತ ವಿಚಾರಣೆ ನಡೆಸುತ್ತಿದ್ದು, ಕಳೆದ ವಿಚಾರಣೆಯಲ್ಲಿ ಬಾರ್ ಕೌನ್ಸಿಲ್‍ನ ಅಭಿಪ್ರಾಯ ತಿಳಿಸುವಂತೆ ಸೂಚಿಸಿತು. ಅದರ ಪ್ರಕಾರ ಇಂದು ನ್ಯಾಯಾಲಯದ ಮುಂದೆ ಹಾಜರಾದ ಕೌನ್ಸಿಲ್‍ನ ಅಧ್ಯಕ್ಷ ಹಾಗೂ ಹಿರಿಯ ವಕೀಲ ಮನನ್ ಕುಮಾರ್ ಮಿಶ್ರಾ ಅವರು ಶೀಘ್ರವೇ ನಿಯಮಾವಳಿಗಳನ್ನು ರೂಪಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಈ ನಿಟ್ಟಿನಲ್ಲಿ ಬಿಸಿಐ ಎಲ್ಲಾ ರಾಜ್ಯಗಳ ಬಾರ್‍ಕೌನ್ಸಿಲ್ ಜತೆ ಸಭೆ ನಡೆಸಿದೆ. ಮುಷ್ಕರಗಳನ್ನು ಹತ್ತಿಕ್ಕುವುದು, ಬಹಿಷ್ಕಾರಗಳಿಗೆ ತಡೆಹಾಕುವುದು, ಬಾರ್‍ಕೌನ್ಸಿಲ್‍ನೊಂದಿಗೆ ನೋಂದಣಿಯಾದ ವಕೀಲರು ಸಮರ್ಥನೀಯ ಕಾರಣವಿಲ್ಲದೆ ಮುಷ್ಕರ ನಡೆಸುವುದಕ್ಕೆ ಅವಕಾಶ ನೀಡದಂತೆ ನಿಯಮಾವಳಿಗಳನ್ನು ರೂಪಿಸಲಾಗುವುದು. ವಕೀಲರು ಸಾಮಾಜಿಕ ಜಾಲತಾಣಗಳಲ್ಲಿ ಮುಷ್ಕರಕ್ಕೆ ಪ್ರಚೋದನೆ ನೀಡುವುದನ್ನು ನಿರ್ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು