ವಿಜಯಪುರ : ಮುಂಬರುವ 7 ಮೇ 2024 ರಂದು ಜರುಗುವ ಸಾರ್ವತ್ರಿಕ ವಿಜಯಪುರ (ಮೀಸಲು) ಲೋಕಸಭೆ ಚುನಾವಣೆ ಪ್ರಚಾರದ ಅಂಗವಾಗಿ ಸ್ಟಾರ್ ಪ್ರಚಾರಕರು ಹಾಗೂ ಮಾಜಿ ಉಪಮುಖ್ಯಮಂತ್ರಿ ಗಳಾದ ಸನ್ಮಾನ್ಯಶ್ರೀ: ಲಕ್ಷ್ಮಣ ಸವದಿ ರವರು ದಿನಾಂಕ:29/04/2024 (ಸೋಮವಾರ) ರಂದು ಸಾಯಂಕಾಲ 5 ಘಂಟೆಗೆ ಇಂಡಿ ತಾಲ್ಲೂಕಿನ ಸಿಂದಗಿ ಮತಕ್ಷೇತ್ರದ “ತಾಂಬಾ”ಗ್ರಾಮದಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿಂದಗಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯಶ್ರೀ:ಅಶೋಕ್ ಮನಗೂಳಿ ರವರು ವಹಿಸಲಿದ್ದಾರೆ.
ಈ ಬೃಹತ್ ಬಹಿರಂಗ ಸಭೆಯಲ್ಲಿ ಕರ್ನಾಟಕ ಘನ ಸರ್ಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯಶ್ರೀ:ಡಾ”ಎಂ.ಬಿ.ಪಾಟೀಲ, ಸಾಹೇಬರು, ಅದೇ ರೀತಿ ಘನ ಸರ್ಕಾರದ ಜವಳಿ,ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಸಚಿವರಾದ ಸನ್ಮಾನ್ಯಶ್ರೀ:ಶಿವಾನಂದ ಪಾಟೀಲ್, ಸಾಹೇಬರು, ಮುದ್ದೇಬಿಹಾಳ ಮತಕ್ಷೇತ್ರದ ಜನಪ್ರಿಯ ಶಾಸಕರು,ಮಾಜಿ ಸಚಿವರಾದ ಸನ್ಮಾನ್ಯಶ್ರೀ:ಅಪ್ಪಾಜಿ ನಾಡಗೌಡ, ಸಾಹೇಬರು, ಇಂಡಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯಶ್ರೀ: ಯಶವಂತರಾಯಗೌಡ ಪಾಟೀಲ, ಸಾಹೇಬರು, ನಾಗಠಾಣ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯಶ್ರೀ:ವಿಠ್ಠಲ್ ಕಟಕದೊಂಡ, ಸಾಹೇಬರು, ಅದೇ ರೀತಿ ವಿಧಾನ ಪರಿಷತ್ ಸದಸ್ಯರಾದ ಸನ್ಮಾನ್ಯಶ್ರೀ:ಪ್ರಕಾಶ ಹುಕ್ಕೇರಿ, ಸಾಹೇಬರು, ಸನ್ಮಾನ್ಯಶ್ರೀ:ಪ್ರಕಾಶ ರಾಠೋಡ, ಸಾಹೇಬರು, ಸನ್ಮಾನ್ಯಶ್ರೀ:ಸುನೀಲಗೌಡ ಪಾಟೀಲ್, ಸಾಹೇಬರು,ಮಾಜಿ ಶಾಸಕರಾದ ಸನ್ಮಾನ್ಯಶ್ರೀ:ಶರಣಪ್ಪ ಸುಣಗಾರ ಸಾಹೇಬರು, ಸನ್ಮಾನ್ಯಶ್ರೀ:ಅಬ್ದುಲ್ ಹಮೀದ್ ಮುಶ್ರೀಫ್ ಸಾಹೇಬರು, ಮಾಜಿ ಶಾಸಕರಾದ ಸನ್ಮಾನ್ಯಶ್ರೀ:ಮಕ್ಬೂಲ್ ಬಾಗವಾನ ಸಾಹೇಬರು ಮತ್ತು ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಮತಿ:ಕಾಂತಾ ನಾಯಕ ರವರು ಭಾಗವಹಿಸಲಿದ್ದಾರೆ.
ಆದಕಾರಣ ಇಂಡಿ,ಸಿಂದಗಿ, ನಾಗಠಾಣ,ದೇವರ ಹಿಪ್ಪರಗಿ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರುಗಳು, ಹಾಗೂ ಎಲ್ಲಾ ಕೆಪಿಸಿಸಿ ಪದಾಧಿಕಾರಿಗಳು, ವಿಜಯಪುರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳು, ಪಕ್ಷದ ಹಿರಿಯ ಮುಖಂಡರುಗಳು, ವಿಜಯಪುರ ಜಿಲ್ಲೆಯ ಎಲ್ಲಾ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರುಗಳು, ಪದಾಧಿಕಾರಿಗಳು, ಕೆಪಿಸಿಸಿ ಸದಸ್ಯರುಗಳು, ಮುಂಚೂಣಿ ಘಟಕಗಳ ಕೆಪಿಸಿಸಿ ಪದಾಧಿಕಾರಿಗಳು, ಜಿಲ್ಲಾ ಅಧ್ಯಕ್ಷರುಗಳು, ಬ್ಲಾಕ್ ಅಧ್ಯಕ್ಷರುಗಳು, ಪದಾಧಿಕಾರಿಗಳು, ಮಾಜಿ ಜಿಲ್ಲಾ ಪಂಚಾಯತ್, ಸದಸ್ಯರುಗಳು ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರುಗಳು, ಸದಸ್ಯರುಗಳು ಜಿಲ್ಲೆಯ ಎಲ್ಲಾ ಗ್ರಾಮಪಂಚಾಯತ್ ಸದಸ್ಯರುಗಳು, ಕಾರ್ಯಕರ್ತರುಗಳು, ಅಭಿಮಾನಿಗಳು ತಪ್ಪದೇ ಕಡ್ಡಾಯವಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಈ ಬೃಹತ್ ಸಭೆಯನ್ನು ಯಶಸ್ವಿ ಗೊಳಿಸಬೇಕೆಂದು ಕೋರಲಾಗಿದೆ. ಮಲ್ಲಿಕಾರ್ಜುನ ಎಸ್ ಲೋಣಿ. ಅಧ್ಯಕ್ಷರು,
ಜಿಲ್ಲಾ ಕಾಂಗ್ರೆಸ್ ಸಮಿತಿ ವಿಜಯಪುರ