ಕಾಸರಗೋಡು: ಯುವಕನ ಅಪಹರಣ, ದರೋಡೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಮೂವರನ್ನು ವಿದ್ಯಾನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕಲ್ಲಕಟ್ಟದ ಸುಲ್ತಾನ್ ಹುಸೇನ್ (28), ಪೊವ್ವಲ್ ನ ಅಬ್ದುಲ್ ಮುನವ್ವರ್ ( 25), ಅನಂಗೂರಿನ ಶಾನ್ ವಾಝ್ (28) ಬಂಧಿತರು.
ಚೆಂಗಳ ರಹಮ್ಮತ್ ನಗರದ ಮುಹಮ್ಮದ್ ಶರೀಫ್ (29) ಅವರನ್ನು ಅಪಹರಿಸಿ ದರೋಡೆ ಗೈದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಅವರನ್ನು ಬಂಧಿಸಲಾಗಿದೆ.
ಫೆ.21 ರಂದು ಮುಂಜಾನೆ ಚೆಂಗಳ ನಾಲ್ಕನೇ ಮೈಲ್ ನಲ್ಲಿ ಶರೀಫ್ ರನ್ನು ಕಾರಿನಲ್ಲಿ ಬಂದ ತಂಡವೊಂದು ಅಪಹರಿಸಿ 17,400 ರೂ. ನಗದು ಮತ್ತು ಮೊಬೈಲ್ ನ್ನು ದೋಚಿದ್ದರು.