ದಕ್ಷಿಣ ಆಫ್ರಿಕಾ ವಿರುದ್ದದ ಮೊದಲ ಟೆಸ್ಟ್ ನ ಮೂರನೇ ದಿನವಾದ ಇಂದು ಭಾರತ ರಬಾಡ ಮತ್ತು ಲುಂಗಿ ಎಂಗಿಡಿ ದಾಳಿಗೆ ಸಿಲುಕಿ 327ರನ್ಗಳಿಗೆ ಆಲೌಟ್ ಆಗಿದೆ.
ಮೊದಲ ದಿನ 3 ವಿಕೆಟ್ ಕಳೆದುಕೊಂಡು 272 ರನ್ಗಳಿಸಿದ್ದ ಭಾರತ, 2ನೇ ದಿನ ಮಳೆ ಕಾರಣ ಆಟವಾಡದೇ , 3ನೇ ದಿನ ಇಂದು ಬ್ಯಾಟಿಂಗ್ ಆರಂಭಿಸಿತ್ತು.
ಇಂದು ಭಾರತ ಕೇವಲ 55 ರನ್ ಗಳಿಸಿ 7 ವಿಕೆಟ್ ಕಳೆದುಕೊಂಡಿತು. ಮಂಗಳವಾರ 122 ರನ್ಗಳೊಂದಿಗೆ ಬ್ಯಾಟಿಂಗ್ ಆರಂಭಿಸಿದ ಕೆಎಲ್ ರಾಹುಲ್ ಒಂದು ರನ್ಗಳಿಸಿ ರಬಾಡಗೆ ವಿಕೆಟ್ ಒಪ್ಪಿಸಿದರು. ರಹಾನೆ 48 ರನ್ಗಳಿಸಿ ಎಂಗಿಡಿಗೆ ವಿಕೆಟ್ ಒಪ್ಪಿಸಿದರು.
ಇವರಿಬ್ಬರ ವಿಕೆಟ್ ಪತನದ ಬಳಿಕ ಭಾರತ ಸತತ 4 ಓವರ್ಗಳಲ್ಲಿ ಅಶ್ವಿನ್(4), ರಿಷಭ್ ಪಂತ್(8), ಶಾರ್ದೂಲ್ ಠಾಕೂರ್(4) ಮತ್ತು ಮೊಹಮ್ಮದ್ ಶಮಿ(8) ವಿಕೆಟ್ ಕಳೆದುಕೊಂಡಿತು. ಕೊನೆಯ ವಿಕೆಟ್ಗೆ ಜಸ್ಪ್ರೀತ್ ಬುಮ್ರಾ(14) ಮತ್ತು ಮೊಹಮ್ಮದ್ ಸಿರಾಜ್ (4) 19 ರನ್ ಗಳಿಸಿದರು.