ತುಮಕೂರು : ವಿಜ್ಞಾನ ಕಾಲೇಜು, ತುಮಕೂರು ವಿಶ್ವವಿದ್ಯಾಲಯ, ತುಮಕೂರು ನ್ಯೂಸ್ ಕರ್ನಾಟಕ.ಕಾಮ್, ಮಂಗಳೂರು ಮತ್ತು ಎಸ್.ಎಲ್.ಎನ್ ಪಬ್ಲಿಕೇಷನ್, ಬೆಂಗಳೂರು ಸಹಯೋಗದಲ್ಲಿ ಖ್ಯಾತ ಅಂಕಣಗಾರ್ತಿ ಡಾ. ಪ್ರಿಯಾಂಕ ಎಂ.ಜಿ. ಅವರ ಕಾಲ ನಾ..! ಮತ್ತು ಹದಿಹರೆಯದವರ ನಿತ್ಯ ಗೊಂದಲಗಳ ಗುಟ್ಟು ಎರಡು ಕೃತಿಗಳ ಆನ್ಲೈನ್ ಲೋಕಾರ್ಪಣೆ ಸಮಾರಂಭ ಡಿಸೆಂಬರ್ 30ರಂದು , ಬೆಳಗ್ಗೆ 11.30 ರ ವೇಳೆ ನಡೆಯಲಿದೆ.
ಈ ಕಾರ್ಯಕ್ರಮವು ಪೂಜ್ಯ ಡಾ. ಶ್ರೀ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ನಡೆಯಲಿದೆ., ಪ್ರೊ. ವೈ. ಎಸ್. ಸಿದ್ದೇಗೌಡ ಅವರು ಕೃತಿ ಲೋಕಾರ್ಪಣೆ ಮಾಡುವರು. ಮತ್ತು, ಬಾ. ಹ. ರಮಾಕುಮಾರಿ, ಡಾ. ಕುಮಾರಸ್ವಾಮಿ ಬಿಜ್ಜಿಹಳ್ಳಿ ಅವರ ಉಪಸ್ಥಿತಿ ಯಲ್ಲಿ ಕಾರ್ಯಕ್ರಮ ನೆರವೇರಲಿದೆ.
ಕಾರ್ಯಕ್ರಮದಲ್ಲಿ ಕಾಲ ನಾ… ಕೃತಿ ಕುರಿತು ಡಾ. ಸಿ. ನಾಗಣ್ಣ ಅವರು ಮಾತನಾಡಲಿದ್ದಾರೆ. ಹಾಗೂ ಡಾ. ಡಿ.ಸಿ ಚಿತ್ರಅಂಗಯ್ಯ ಅವರು ಹದಿಹರೆಯದವರ ನಿತ್ಯ ಗೊಂದಲಗಳ ಗುಟ್ಟು ಕೃತಿ ಕುರಿತು ಮಾತನಾಡುವರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರೊ. ಕೆ. ಶಿವಚಿತ್ತಪ್ , ಶ್ರೀಮತಿ, ಶಾಲಿನಿ ಬಿ.ಆರ್. , ಶ್ರೀ ನಾಗರಾಜ ಇಳೆಗುಂಡಿ,. ಶ್ರೀ ವಲೇರಿಯನ್ ಡಾಲ್ಮೇಡಾ, ಶ್ರೀ ಉಮೇಶ್ , ಡಾ.ಲೋಕೇಶ್ ಬಾಬು ಉಪಸ್ಥಿತರಿರುವರು.