News Karnataka Kannada
Monday, April 29 2024
ತುಮಕೂರು

ಅಂಕಣಗಾರ್ತಿ ಡಾ. ಪ್ರಿಯಾಂಕ ಎಂ.ಜಿ. ಅವರ ಎರಡು ಕೃತಿಗಳ ಆನ್ಲೈನ್ ಲೋಕಾರ್ಪಣೆ ಸಮಾರಂಭ

Tumkur
Photo Credit :

ತುಮಕೂರು : ವಿಜ್ಞಾನ ಕಾಲೇಜು, ತುಮಕೂರು ವಿಶ್ವವಿದ್ಯಾಲಯ, ತುಮಕೂರು ನ್ಯೂಸ್ ಕರ್ನಾಟಕ.ಕಾಮ್, ಮಂಗಳೂರು ಮತ್ತು ಎಸ್.ಎಲ್.ಎನ್ ಪಬ್ಲಿಕೇಷನ್, ಬೆಂಗಳೂರು ಸಹಯೋಗದಲ್ಲಿ ಖ್ಯಾತ ಅಂಕಣಗಾರ್ತಿ ಡಾ. ಪ್ರಿಯಾಂಕ ಎಂ.ಜಿ. ಅವರ ಕಾಲ ನಾ..! ಮತ್ತು ಹದಿಹರೆಯದವರ ನಿತ್ಯ ಗೊಂದಲಗಳ ಗುಟ್ಟು ಎರಡು ಕೃತಿಗಳ ಆನ್ಲೈನ್ ಲೋಕಾರ್ಪಣೆ ಸಮಾರಂಭ ಡಿಸೆಂಬರ್ 30ರಂದು , ಬೆಳಗ್ಗೆ 11.30 ರ ವೇಳೆ ನಡೆಯಲಿದೆ.

ಈ ಕಾರ್ಯಕ್ರಮವು ಪೂಜ್ಯ ಡಾ. ಶ್ರೀ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ನಡೆಯಲಿದೆ., ಪ್ರೊ. ವೈ. ಎಸ್. ಸಿದ್ದೇಗೌಡ ಅವರು ಕೃತಿ ಲೋಕಾರ್ಪಣೆ ಮಾಡುವರು. ಮತ್ತು, ಬಾ. ಹ. ರಮಾಕುಮಾರಿ, ಡಾ. ಕುಮಾರಸ್ವಾಮಿ ಬಿಜ್ಜಿಹಳ್ಳಿ ಅವರ ಉಪಸ್ಥಿತಿ ಯಲ್ಲಿ ಕಾರ್ಯಕ್ರಮ ನೆರವೇರಲಿದೆ.

ಕಾರ್ಯಕ್ರಮದಲ್ಲಿ ಕಾಲ ನಾ… ಕೃತಿ ಕುರಿತು ಡಾ. ಸಿ. ನಾಗಣ್ಣ ಅವರು ಮಾತನಾಡಲಿದ್ದಾರೆ. ಹಾಗೂ ಡಾ. ಡಿ.ಸಿ ಚಿತ್ರಅಂಗಯ್ಯ ಅವರು ಹದಿಹರೆಯದವರ ನಿತ್ಯ ಗೊಂದಲಗಳ ಗುಟ್ಟು ಕೃತಿ ಕುರಿತು ಮಾತನಾಡುವರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರೊ. ಕೆ. ಶಿವಚಿತ್ತಪ್ , ಶ್ರೀಮತಿ, ಶಾಲಿನಿ ಬಿ.ಆರ್. , ಶ್ರೀ ನಾಗರಾಜ ಇಳೆಗುಂಡಿ,. ಶ್ರೀ ವಲೇರಿಯನ್ ಡಾಲ್ಮೇಡಾ, ಶ್ರೀ ಉಮೇಶ್ , ಡಾ.ಲೋಕೇಶ್ ಬಾಬು ಉಪಸ್ಥಿತರಿರುವರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು