News Karnataka Kannada
Monday, April 29 2024
ಉತ್ತರ ಪ್ರದೇಶ

“ಮಾಲೆಗಾಂವ್ ಸ್ಫೋಟದಲ್ಲಿ ಯೋಗಿ ಮತ್ತು ಆರೆಸ್ಸೆಸ್ ಹೆಸರಿಸುವಂತೆ ಹಿಂಸಿಸಲಾಗಿತ್ತು”

Yogi Adithyanath
Photo Credit :

ರಾಷ್ಟ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯವು 2008ರ ಮಾಲೆಗಾಂವ್ ಸ್ಫೋಟದ ಕುರಿತು ವಿಚಾರಣೆ ನಡೆಸುತ್ತಿದೆ. ಇದೀಗ, ಪ್ರಕರಣದ ಸಾಕ್ಷಿಯೊಬ್ಬರು ಅಂದಿನ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ವಿರುದ್ಧ ನ್ಯಾಯಾಲಯದೆದುರು ಗಂಭೀರ ಆರೋಪ ಮಾಡಿದ್ದಾರೆ.

ಮಾಲೆಗಾಂವ್ ಪ್ರಕರಣದಲ್ಲಿ ಯೋಗಿ ಆದಿತ್ಯನಾಥ ಹಾಗೂ ಆರೆಸ್ಸೆಸ್ ಗೆ ಸೇರಿದ ಇನ್ನು ನಾಲ್ವರನ್ನು ಹೆಸರಿಸುವುದಕ್ಕೆ ತಮ್ಮನ್ನುಹಿಂಸೆಗೆ ಒಳಪಡಿಸಲಾಗಿತ್ತು ಎಂದು ಸಾಕ್ಷಿ ಹೇಳುತ್ತಿದ್ದ ವ್ಯಕ್ತಿ ಆರೋಪಿಸಿದ್ದಾರೆ.

ರಿಪಬ್ಲಿಕ್ ಟಿವಿ ವರದಿ ಮಾಡಿರುವ ಪ್ರಕಾರ, ಸ್ವಾಮಿ ಅಸೀಮಾನಂದ, ಇಂದ್ರೇಶ ಕುಮಾರ, ಕಾಕಾಜಿ ಮತ್ತು ದೇವಧರಜೀ ಅವರ ಹೆಸರುಗಳನ್ನು ತೆಗೆದುಕೊಳ್ಳುವುದಕ್ಕೆ ಸಾಕ್ಷಿಯ ಮೇಲೆ ಒತ್ತಡ ಹೇರಲಾಗಿತ್ತು.

ಯುಪಿಎ ಸರ್ಕಾರದ ಅವಧಿಯಲ್ಲಿ ಮಾಲೆಗಾಂವ್ ಸ್ಫೋಟದ ಸಂಬಂಧ ಶುರುವಾದ ತನಿಖೆಗಳು ಅದಾಗಲೇ ವ್ಯಾಪಕ ಸಂದೇಹ ಮತ್ತು ಟೀಕೆಗಳನ್ನು ಹುಟ್ಟುಹಾಕಿದ್ದವು. ‘ಹಿಂದು ಭಯೋತ್ಪಾದನೆ’ ಎಂಬುದೊಂದಿದೆ ಎಂದು ಸಾಬೀತುಪಡಿಸಲೆಂದೇ ತನಿಖೆಯ ದಿಕ್ಕು ಸಾಗಿತ್ತು ಎಂಬ ಬಗ್ಗೆ ಅದಾಗಲೇ ಹಲವು ಆರೋಪಗಳು ಕೇಳಿಬಂದಿದ್ದವು. ಇದೀಗ ನ್ಯಾಯಾಲಯದ ಎದುರು ಸಾಕ್ಷಿಯ ಹೇಳಿಕೆ ಹೊಸ ಸೇರ್ಪಡೆ ಅಷ್ಟೆ.

ಯುಪಿಎ ಸರ್ಕಾರದ ಅವಧಿಯಲ್ಲಿ ಸರ್ಕಾರದ ಉನ್ನತ ಹುದ್ದೆಗಳಲ್ಲಿದ್ದ ಅಧಿಕಾರಿ ಆರ್ ವಿ ಎಸ್ ಮಣಿ ಎಂಬುವವರು ಈ ಹಿಂದೆ ತಮ್ಮ ಸಂದರ್ಶನ ಮತ್ತು ಬರಹಗಳ ಮೂಲಕ ಮಾಲೆಗಾಂವ್, ಸಮಜೋತಾ, ಬಾಟ್ಲಾ ಹೌಸ್ ಎನ್ಕೌಂಟರ್ ಇಲ್ಲೆಲ್ಲ ಕೇಸರಿ ಭಯೋತ್ಪಾದನೆ ಇದೆ ಎಂದು ನಿರೂಪಿಸುವುದಕ್ಕೆ ಸರ್ಕಾರ ಭಾರಿ ಪ್ರಯತ್ನ ಮಾಡಿತ್ತು ಎಂಬುದನ್ನು ಜಾಹೀರಾಗಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು