ಲಂಡನ್ : ಪಂದ್ಯದ ಆರಂಭದಿOದಲೂ ಸಮಬಲವಾಗಿ ಆಟವಾಡಿದ ಇಂಗ್ಲೆOಡ್ ಐದನೇ ಹಾಗೂ ಅಂತಿಮ ದಿನದಾಟದಲ್ಲಿ ವಿಚಿತ್ರ ತಿರುವು ಪಡೆಯಿತು. ಕೊನೇ ದಿನ ಪ್ರವಾಸಿ ಟೀಮ್ ಇಂಡಿಯಾ ಅಕ್ಷರಶಃ ಪ್ರಾಬಲ್ಯ ಮೆರೆದು ಜೋ ರೂಟ್ ಬಳಗದ ಎದುರು 151 ರನ್ಗಳ ಗೆಲುವು ಸಾಧಿಸಿತು.
ಇದರ ಬೆನ್ನಲ್ಲೇ ಇಂಗ್ಲೆOಡ್ ತಂಡದ ಬ್ಯಾಟಿಂಗ್ ವಿಭಾಗವನ್ನು ಕಠಿಣವಾಗಿ ಟೀಕಿಸಲಾಗಿದೆ. ಸರಣಿಯಲ್ಲಿ ಜೋ ರೂಟ್ ಬ್ಯಾಕ್ ಟು ಬ್ಯಾಕ್ ಶತಕ ಬಾರಿಸಿ ಗಮನ ಸೆಳೆದಿದ್ದಾರೆ ಆದರೂ ಇಂಗ್ಲೆOಡ್ ಬೇರೆ ಯಾವ ಬ್ಯಾಟ್ಸ್ಮನ್ಗಳಿಂದಲೂ ಹೇಳಿಕೊಳ್ಳುವ ಪ್ರದರ್ಶನ ಬರದೇ ಇರುವುದು ತಂಡದ ವೈಫಲ್ಯಕ್ಕೆ ಪ್ರಮುಖ ಕಾರಣವಾಗಿದೆ.ಇಂಗ್ಲೆOಡ್ ತನ್ನ ಎರಡನೇ ಇನಿಂಗ್ಸ್ನಲ್ಲಿ ಕೇವಲ 60 ಓವರ್ಗಳ ಅಂತರದಲ್ಲಿ 120 ರನ್ಗಳಿಗೆ ಆಲ್ಔಟ್ ಆಯಿತು. ಇದು ಇಂಗ್ಲೆAಡ್ ತಂಡ ತಾಯ್ನಾಡಿನಲ್ಲಿ ಭಾರತದ ವಿರುದ್ಧ ಗಳಿಸಿದ ಅತ್ಯಂತ ಕಡಿಮೆ ಮೊತ್ತವಾಗಿದೆ. ಮೊಹಮ್ಮದ್ ಸಿರಾಜ್ (4 ವಿಕೆಟ್) ಮತ್ತು ಜಸ್ಪ್ರೀತ್ ಬುಮ್ರಾ (3 ವಿಕೆಟ್) ದಾಳಿಗೆ ಉತ್ತರಿಸಲಾಗದೆ ಇಂಗ್ಲೆOಡ್ ಬ್ಯಾಟ್ಸ್ಮನ್ಗಳು ಪೆವಿಲಿಯನ್ ಪರೇಡ್ ನಡೆಸಿದರು.
ಈ ಬಗ್ಗೆ ಮಾತನಾಡಿರುವ ಇಂಗ್ಲೆOಡ್ ತಂಡದ ಮಾಜಿ ನಾಯಕ ಜೆಫ್ರಿ ಬಾಯ್ಕಾಟ್ ಪಂದ್ಯದ ಕೊನೇ ದಿನ ಜೋ ರೂಟ್ ನಾಯಕತ್ವದಲ್ಲಿ ಮಾಡಿದ ಎಡವಟ್ಟುಗಳನ್ನು ಟೀಕಿಸಿದ್ದಾರೆ. ಅಷ್ಟೇ ಅಲ್ಲದೆ ಇಂಗ್ಲೆAಡ್ ತಂಡದಿAದ ಇಷ್ಟು ಕಳಪೆ ಆಟ ನಿರೀಕ್ಷಿಸಿರಲಿಲ್ಲ ಎಂದು ಅಚ್ಚರಿ ಹೊರಹಾಕಿದ್ದಾರೆ. ಇದೇ ವೇಳೆ ಟೀಮ್ ಇಂಡಿಯಾ ಆಟಗಾರರನ್ನು ಅನಗತ್ಯವಾಗಿ ಕೆಣಕಿ ಅವರನ್ನು ಕೆರಳುವಂತೆ ಮಾಡಿದ್ದು ಕೂಡ ಸೋಲಿಗೆ ಮುಖ್ಯ ಕಾರಣಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ.
“ಈ ಟೆಸ್ಟ್ ಪಂದ್ಯದಲ್ಲಿ ಎರಡು ವಿಷಯ ಸಾಬೀತಾಗಿದೆ. ಮೊದಲಿಗೆ ನೀವು ಮೂರ್ಕರು ಈ ಪಂದ್ಯ ಗೆಲ್ಲಲು ನೀವು ಯೋಗ್ಯರಲ್ಲ. ಜೋ ರೂಟ್ ಬ್ಯಾಟಿಂಗ್ನ ನಾವೆಲ್ಲರೂ ಪ್ರೀತಿಸುತ್ತೇವೆ. ಆದರೆ ಅವರ ಕಳಪೆ ರಣತಂತ್ರದ ಮೂಲಕ ತಂಡವನ್ನು ಸೋಲಿನಲ್ಲಿ ಮುಳುಗುವಂತೆ ಮಾಡಿದರು,” ಎಂದು ಬಾಯ್ಕಾಟ್ ಮಾತಿನ ಚಾಟಿ ಬೀಸಿದ್ದಾರೆ.