News Karnataka Kannada
Thursday, May 02 2024
ಕ್ರೀಡೆ

ಈ ಭಾರತೀಯ ಆಟಗಾರನಲ್ಲಿ ರಾಹುಲ್‌ ದ್ರಾವಿಡ್ ಛಾಯೆ ಕಾಣುತ್ತಿತ್ತು : ದನೀಶ್‌ ಕನೇರಿಯಾ

New Project (80)
Photo Credit :
ಲಂಡನ್‌: ಇಂಗ್ಲೆಂಡ್‌ ವಿರುದ್ಧ ಎರಡನೇ ಟೆಸ್ಟ್ ನಲ್ಲಿ   ಶತಕ ಬಾರಿಸಿದ ಕನ್ನಡಿಗ  ಕೆ.ಎಲ್ ರಾಹುಲ್‌ ಅವರನ್ನು,ಪಾಕಿಸ್ತಾನ ಮಾಜಿ ಸ್ಪಿನ್ನರ್‌ ದನೀಶ್‌ ಕನೇರಿಯಾ, ಈ ಭಾರತೀಯ ಆಟಗಾರನಲ್ಲಿ ರಾಹುಲ್‌ ದ್ರಾವಿಡ್ ಛಾಯೆ ಕಾಣುತ್ತಿತ್ತು ಎಂದು ಹೇಳಿದ್ದಾರೆ.

ಇಲ್ಲಿನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ್ದ ಭಾರತ ತಂಡ ಮೊದಲನೇ ದಿನದಾಟದ ಅಂತ್ಯಕ್ಕೆ ಪ್ರಥಮ ಇನಿಂಗ್ಸ್‌ನಲ್ಲಿ 90 ಓವರ್‌ಗಳಿಗೆ 3 ವಿಕೆಟ್‌ ನಷ್ಟಕ್ಕೆ 276 ರನ್‌ ಗಳಿಸಿತ್ತು. ಮೊದಲನೇ ದಿನ ಅದ್ಭುತ ಬ್ಯಾಟಿಂಗ್‌ ಪ್ರದರ್ಶನ ತೋರಿದ ಕೆ.ಎಲ್‌ ರಾಹುಲ್‌ 12 ಬೌಂಡರಿ ಹಾಗೂ ಒಂದು ಸಿಕ್ಸರ್‌ ನೆರವಿನಿಂದ ಅಜೇಯ 127 ರನ್‌ ಗಳಿಸಿದ್ದಾರೆ.

ಔಟ್‌ ಸೈಡ್‌ ಆಫ್‌ ದಿ ಸ್ಟಂಪ್‌ ಎಸೆತಗಳನ್ನು ಹೇಗೆ ಬಿಡುತ್ತಿದ್ದರು ಹಾಗೂ ಬೌಲರ್‌ಗಳು ತಪ್ಪು ಮಾಡುವವರೆಗೂ ಹೇಗೆ ಕೆ.ಎಲ್‌ ರಾಹುಲ್‌ ಕಾಯುತ್ತಿದ್ದರು ಎಂಬ ಬಗ್ಗೆ ದನೀಶ್‌ ಕನೇರಿಯಾ ಬೆಳಕು ಚೆಲ್ಲಿದ್ದಾರೆ. ರಾಹುಲ್ ಆರಂಭಿಕ 105 ಎಸೆತಗಳಲ್ಲಿ ಕೇವಲ 22 ರನ್‌ ಗಳಿಸಿದ್ದರು. ನಂತರ, ಯಾವುದೇ ತಪ್ಪು ಮಾಡದೆ ಪರಿಪೂರ್ಣ ಇನಿಂಗ್ಸ್ ಆಡಿದ್ದರು ಹಾಗೂ ರನ್‌ ಗಳಿಸಬಹುದಾದ ಅವಕಾಶಗಳನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಂಡಿದ್ದರು.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು