ಕರಾಚಿ: ಉರಿ ಉಗ್ರರ ದಾಳಿಯಲ್ಲಿ ಭಾರತದ 18 ಯೋಧರು ಹುತಾತ್ಮರಾಗಿದ್ದು, ಪಾಕಿಸ್ತಾನ ಭಯೋತ್ಪಾದನೆಯನ್ನು ಬೆಂಬಲಿಸುತ್ತಿದ್ದು, ಉಗ್ರರನ್ನೊಳಗೊಂಡ ಪಾಕ್ ದೇಶದ ಜೊತೆ ಕ್ರಿಕೆಟ್ ಆಡಲು ಸಾಧ್ಯವಿಲ್ಲ ಎಂದು ದಾಳಿಯನ್ನು ಖಂಡಿಸಿ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಹೇಳಿದ್ದಾರೆ.
ಬಿಸಿಸಿಐ ಅಧ್ಯಕ್ಷನ ಈ ಮಾತಿಗೆ ಪಾಕ್ ನ ಮಾಜಿ ನಾಯಕ ಮುಹಮ್ಮದ್ ಯೂಸುಫ್ ಅಪಹಾಸ್ಯ ಮಾಡಿದ್ದು, ಈ ಹಿಂದೆಯೂ ಎರಡು ದೇಶಗಳ ನಡುವಿನ ಸಂಬಂಧ ಸರಿಯಿದ್ದಾಗಲೂ ಪಾಕ್ ಜೊತೆ ಭಾರತ ಪಂದ್ಯಗಳನ್ನಾಡಲು ನಿರಾಕರಿಸಿದ್ದು, ಕಳೆದ ಎಂಟು ವರ್ಷಗಳಿಂದ ಯಾವುದೇ ದ್ವಿಪಕ್ಷೀಯ ಪಂದ್ಯಗಳು ಉಭಯ ದೇಶಗಳ ನಡುವೆ ನಡೆಯದೇ ಇರುವುದು ಹಾಗೂ ಈಗ ಅನುರಾಗ್ ನೀಡಿರುವ ಹೇಳಿಕೆ ನಗು ತರುವಂತಿದೆ ಎಂದಿದ್ದಾರೆ.