ಗದಗ: ಕನ್ನಡ ಕಿರುತೆರೆಯ ಸೂಪರ್ ಹಿಟ್ ಶೋ ಡ್ರಾಮಾ ಜ್ಯೂನಿಯರ್ಸ್ ಗ್ರ್ಯಾಂಡ್ ಫಿನಾಲೆ ಹಂತ ತಲುಪಿದ್ದು, ಇಂದು ಸಂಜೆ ಕಾರ್ಯಕ್ರಮ ಆರಂಭಗೊಂಡಿದ್ದು, ಎಲ್ಲಾ ಕನ್ನಡಿಗರ ಚಿತ್ತ ಈಗ ಗದಗ ದತ್ತ ಸಾಗಿದೆ.
ಗದಗದ ವಿದ್ಯಾದಾನ ಸಮಿತಿಯ ಮೈದಾನದಲ್ಲಿ ಸುಂದರವಾದ ವೇದಿಕೆ ನಿರ್ಮಿಸಲಾಗಿದ್ದು, ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದು, ವಿನ್ನರ್ ಯಾರಾಗಬಹುದೆಂಬ ಕುತೂಹಲದಲ್ಲಿದ್ದಾರೆ. ಸ್ಪರ್ಧಿ ಪುಟ್ಟರಾಜು ಕೂಡಾ ಇದೇ ಊರಿನವನಾಗಿದ್ದು, ಅಚಿಂತ್ಯ ಮತ್ತು ಪುಟ್ಟರಾಜು ನಡುವೆ ತೀವ್ರ ಪೈಪೋಟಿಯಿದ್ದು, ಮಹೀಂದ್ರ, ಚಿತ್ರಾಲಿ ಹಾಗೂ ಅಮೋಘ ಕೂಡ ಗೆಲುವಿನ ರೇಸ್ ನಲ್ಲಿದ್ದಾರೆ.
ಚಿಕ್ಕ ಮಕ್ಕಳಿಂದ ಹಿಡಿದು ಮುದುಕರವರೆಗೂ ಎಲ್ಲರ ಮನೆ ಮನವನ್ನು ಗೆದ್ದಂತಹ, ಜ್ಹೀ ಕನ್ನಡ ವಾಹಿನಿಯ ಡ್ರಾಮಾ ಜ್ಯೂನಿಯರ್ಸ್ ಅಂತಿಮ ಸುತ್ತಿನಲ್ಲಿ ಅಚಿಂತ್ಯ, ತುಷಾರ್, ಪುಟ್ಟರಾಜು, ಅಮೋಘ, ಚಿತ್ರಾಲಿ, ಮಹೀಂದ್ರ, ರೇವತಿ ಹಾಗೂ ತೇಜಸ್ವಿನಿ, ಒಟ್ಟು 8 ಜನ ಸ್ಪರ್ಧಿಗಳಿದ್ದು, ಚಾಂಪಿಯನ್ ಯಾರಾಗ್ತಾರೆ ಎಂಬ ಕುತೂಹಲಕ್ಕೆ ಇಂದು ರಾತ್ರಿ ಗದಗದಲ್ಲಿ ತೆರೆ ಬೀಳಲಿದೆ.