News Karnataka Kannada
Monday, May 20 2024
ಬೆಂಗಳೂರು ನಗರ

ಮೋದಿ ಮಧ್ಯಸ್ಥಿಕೆ ವಹಿಸಿದ್ದಲ್ಲಿ ಮಾತ್ರ ಕಾವೇರಿ ಸಮಸ್ಯೆ ಪರಿಹಾರ ಸಾಧ್ಯ: ರಮ್ಯಾ

Photo Credit :

ಮೋದಿ ಮಧ್ಯಸ್ಥಿಕೆ ವಹಿಸಿದ್ದಲ್ಲಿ ಮಾತ್ರ ಕಾವೇರಿ ಸಮಸ್ಯೆ ಪರಿಹಾರ ಸಾಧ್ಯ: ರಮ್ಯಾ

ಬೆಂಗಳೂರು: ಇತ್ತೀಚೆಗೆ ವಿವಾದಗಳ ಹೇಳಿಕೆ ನೀಡಿ ಸುದ್ದಿಯಲ್ಲಿರುವ ಸ್ಯಾಂಡಲ್ ವುಡ್ ರಾಣಿ ಹಾಗೂ ಮಾಜಿ ಸಂಸದೆ ರಮ್ಯ ಅವರು, ಕಾವೇರಿ ವಿವಾದದ ಬಗ್ಗೆ ಪ್ರಧಾನಿ ಮೋದಿಯವರಿಗೆ ಪತ್ರವೊಂದು ಬರೆದಿದ್ದಾರೆ.

ಜನಸಾಮಾನ್ಯರೂ ಕೂಡ ಕೈಜೋಡಿಸಬೇಕೆಂದು ಕೇಳಿ ಕೊಂಡಿರುವ ರಮ್ಯಾ, ತಮ್ಮ ತಮ್ಮ ಕ್ಷೇತ್ರದ ಸಂಸದರ ಸಹಿ ಹಾಗೂ ಭಾವಚಿತ್ರ ಮತ್ತು ತಾವು ಬರೆದಿರುವ ಪತ್ರದ ಪ್ರತಿಯೊಂದಿಗೆ ಅಪ್ಲೋಡ್ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಪ್ರಧಾನಿ ಮಧ್ಯಸ್ಥಿಕೆ ವಹಿಸಿದಾಗ ಮಾತ್ರ ಕಾವೇರಿ ಸಮಸ್ಯೆ ಬಗೆಹರಿಯಲು ಸಾಧ್ಯವಾಗಿದ್ದು, ಉಭಯ ರಾಜ್ಯದ ಮುಖ್ಯ ಮಂತ್ರಿಗಳ ಜೊತೆ  ಪ್ರಧಾನಿ ಚರ್ಚೆ ನಡೆಸಿ, ಕಾವೇರಿ ಸಮಸ್ಯೆ ಬಗೆಹರಿಸಲು ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸಬೇಕೆಂದು ರಮ್ಯಾ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದು, ಪ್ರಧಾನಿಗೆ ಬರೆದ ಪತ್ರವನ್ನು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಹಾಕಿದ್ದಾರೆ.

ರಾಜ್ಯದಲ್ಲಿ ಕಾವೇರಿ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದರ ಬಗ್ಗೆ ತಲೆ ಕೆಡಿಸಿಕೊಳ್ಳದಂತಿದ್ದ ರಮ್ಯಾ ಬಗ್ಗೆ ರಾಜ್ಯದಲ್ಲಿ ಅಸಮಾಧಾನ ಕೂಡ ಕೇಳಿ ಬಂದಿತ್ತು, ಇದೀಗ ರಮ್ಯಾ ಫೇಸ್ ಬುಕ್ ನಲ್ಲಿ ಕಾವೇರಿ ಬಗ್ಗೆ ಸುಧೀರ್ಘ ಲೇಖನ ಬರೆದು ಎಲ್ಲರ ಗಮನಸೆಳೆಯುದರ ಜೊತೆಗೆ ಮೋದಿ ಮಧ್ಯಸ್ಥಿಕೆಯಿಂದ ಮಾತ್ರ  ಕಾವೇರಿ ಸಮಸ್ಯೆ ಬಗೆಹರಿಸಬಹುದು ಎಂದಿದ್ದಾರೆ .

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು