ಬೆಂಗಳೂರು: ಇತ್ತೀಚೆಗೆ ವಿವಾದಗಳ ಹೇಳಿಕೆ ನೀಡಿ ಸುದ್ದಿಯಲ್ಲಿರುವ ಸ್ಯಾಂಡಲ್ ವುಡ್ ರಾಣಿ ಹಾಗೂ ಮಾಜಿ ಸಂಸದೆ ರಮ್ಯ ಅವರು, ಕಾವೇರಿ ವಿವಾದದ ಬಗ್ಗೆ ಪ್ರಧಾನಿ ಮೋದಿಯವರಿಗೆ ಪತ್ರವೊಂದು ಬರೆದಿದ್ದಾರೆ.
ಜನಸಾಮಾನ್ಯರೂ ಕೂಡ ಕೈಜೋಡಿಸಬೇಕೆಂದು ಕೇಳಿ ಕೊಂಡಿರುವ ರಮ್ಯಾ, ತಮ್ಮ ತಮ್ಮ ಕ್ಷೇತ್ರದ ಸಂಸದರ ಸಹಿ ಹಾಗೂ ಭಾವಚಿತ್ರ ಮತ್ತು ತಾವು ಬರೆದಿರುವ ಪತ್ರದ ಪ್ರತಿಯೊಂದಿಗೆ ಅಪ್ಲೋಡ್ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಪ್ರಧಾನಿ ಮಧ್ಯಸ್ಥಿಕೆ ವಹಿಸಿದಾಗ ಮಾತ್ರ ಕಾವೇರಿ ಸಮಸ್ಯೆ ಬಗೆಹರಿಯಲು ಸಾಧ್ಯವಾಗಿದ್ದು, ಉಭಯ ರಾಜ್ಯದ ಮುಖ್ಯ ಮಂತ್ರಿಗಳ ಜೊತೆ ಪ್ರಧಾನಿ ಚರ್ಚೆ ನಡೆಸಿ, ಕಾವೇರಿ ಸಮಸ್ಯೆ ಬಗೆಹರಿಸಲು ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸಬೇಕೆಂದು ರಮ್ಯಾ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದು, ಪ್ರಧಾನಿಗೆ ಬರೆದ ಪತ್ರವನ್ನು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಹಾಕಿದ್ದಾರೆ.
ರಾಜ್ಯದಲ್ಲಿ ಕಾವೇರಿ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದರ ಬಗ್ಗೆ ತಲೆ ಕೆಡಿಸಿಕೊಳ್ಳದಂತಿದ್ದ ರಮ್ಯಾ ಬಗ್ಗೆ ರಾಜ್ಯದಲ್ಲಿ ಅಸಮಾಧಾನ ಕೂಡ ಕೇಳಿ ಬಂದಿತ್ತು, ಇದೀಗ ರಮ್ಯಾ ಫೇಸ್ ಬುಕ್ ನಲ್ಲಿ ಕಾವೇರಿ ಬಗ್ಗೆ ಸುಧೀರ್ಘ ಲೇಖನ ಬರೆದು ಎಲ್ಲರ ಗಮನಸೆಳೆಯುದರ ಜೊತೆಗೆ ಮೋದಿ ಮಧ್ಯಸ್ಥಿಕೆಯಿಂದ ಮಾತ್ರ ಕಾವೇರಿ ಸಮಸ್ಯೆ ಬಗೆಹರಿಸಬಹುದು ಎಂದಿದ್ದಾರೆ .