ವಿಜಯಪುರ : ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷರಾದ ಶಬ್ಬೀರ ಜಾಗೀರದಾರ ರವರ ಅಧ್ಯಕ್ಷತೆಯಲ್ಲಿ ಈ ಬಾರಿ ಕರ್ನಾಟಕ ವಿಧಾನಪರಿಷತ್ ಗೆ ನಡೆಯುವ ಚುನಾವಣೆಯಲ್ಲಿ ವಿಜಯಪುರ ಜಿಲ್ಲೆಗೆ ಅಲ್ಪಸಂಖ್ಯಾತ ಸಮುದಾಯದ ಮುಸ್ಲಿಂರಿಗೆ ಆದ್ಯತೆ ನೀಡಬೇಕೆಂದು ಒತ್ತಾಯಿಸಿ ವಿಜಯಪುರ ಜಿಲ್ಲಾ ಅಲ್ಪಸಂಖ್ಯಾತ ವಿಭಾಗದ ಸಭೆಯಲ್ಲಿ ಸಮಸ್ತ ಜಿಲ್ಲೆಯ ಎಲ್ಲಾ ಅಲ್ಪಸಂಖ್ಯಾತ ಮುಖಂಡರುಗಳು ಹಾಗೂ ನಾಯಕರುಗಳು ಕೂಡಿ ಸರ್ವಾನು ಮತದಿಂದ ಠರಾವು ಪಾಸು ಮಾಡಲಾಯಿತು.
ಕಾಂಗ್ರೆಸ ಪಕ್ಷ ಅಧಿಕಾರಕ್ಕೆ ಬರಲು ವಿಜಯಪುರ ಜಿಲ್ಲೆಯ ಅಲ್ಪಸಂಖ್ಯಾತ ಸಮುದಾಯದ ಕೊಡುಗೆ ಅಪಾರವಾಗಿದ್ದು. ಜಿಲ್ಲೆಯಲ್ಲಿ ಪಕ್ಷದ ಸಂಘಟನೆ ದೃಷ್ಟಿಯಿಂದ ಇದು ಅತ್ಯವಶ್ಯಕವಾಗಿದ್ದು. ಜಿಲ್ಲೆಯ ಕಾಂಗ್ರೆಸ್ ಪಕ್ಷದ ನಾಯಕರುಗಳು ಈ ನಿಟ್ಟಿನಲ್ಲಿ ಮುತುವರ್ಜಿ ವಹಿಸಿ ನ್ಯಾಯ ಒದಗಿಸಲು ಆಗ್ರಹಿಸಲಾಯಿತು.
ಈ ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ಅಬ್ದುಲ್ ಹಮೀದ್ ಮುಶ್ರೀಫ್, ಮಹ್ಮದರಫೀಕ ಟಪಾಲ್,ಆಜಾದ್ ಪಟೇಲ್, ಎಸ್.ಎಂ.ಪಾಟೀಲ್ ಗಣಿಹಾರ,ಚಾಂದಸಾಬ ಗಡಗಲಾವ, ಜಮೀರ ಬಕ್ಷೀ, ಎಂ.ಸಿ.ಮುಲ್ಲಾ, ಐ.ಎಂ.ಇಂಡೀಕರ, ಡಿ.ಹೆಚ್.ಕಲಾಲ, ಎಚ್.ಎಂ.ಬಾಗವಾನ,
ಯಾಕುಬ್ ನಾಟೀಕಾರ, ಫಯಾಜ ಕಲಾದಗಿ, ಅನ್ವರ ಜಮಾದಾರ, ದಸ್ತಗೀರ ಸಾಲೋಟಗಿ,ಇಲಿಯಾಸ ಸಿದ್ದಿಕಿ,ರಜಾಕಸಾಬ ಕಾಖಂಡಕಿ, ತಾಜುದ್ದೀನ್ ಖಲೀಫಾ, ಅಲ್ಲಾಬಕ್ಷ, ಅಸ್ಮಾ ಕಾಲೇಬಾಗ, ಹಮೀದಾ ಪಟೇಲ್, ಅಕ್ಬರ್ ಗೋಕಾವಿ, ಅವಾಹಿಲ್ ಹಕ್ ಪಾಟೀಲ, ಕುಲದೀಪ್ ಸಿಂಗ್, ಅಬೂಬಕರ್ ಕಂಬಾಗಿ, ಲಾಲಸಾಬ ಕೋರಬು, ಹಾಜಿಲಾಲ ದಳವಾಯಿ, ಗುರಿಕಾರ, ಪೈರೋಜ ಶೇಖ, ಶಕೀಲ್ ಗಡೇದ, ಸಮೀರ ತಾಜಿಂತರಕ ಮುಂತಾದವರು ಉಪಸ್ಥಿತರಿದ್ದರು.